Select Your Language

Notifications

webdunia
webdunia
webdunia
webdunia

ಮಾಂಗಲ್ಯ ಸರದ ಹವಳ ಗಂಡನ ಜೀವಕ್ಕೇ ಕುತ್ತಂತೆ..! ರಾಜ್ಯಾದ್ಯಂತ ಹರಡಿದೆ ವದಂತಿ

ಕೆಂಪು ಹವಳ
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ವಿಚಿತ್ರ ವದಂತಿಯೊಂದು ಹಬ್ಬಿದೆ. ಮಾಂಗಲ್ಯ ಸರದಲ್ಲಿನ ಕೆಂಪು ಹವಳ ಪತಿಯ ಜೀವಕ್ಕೇ ಕುತ್ತು ತರುತ್ತಂತೆ. ಮಾಂಗಲ್ಯ ಸರದಹವಳ ಮಾತನಾಡುತ್ತಂತೆ. ಯಾವ ಮಹಿಳೆಯ ಸರದಲ್ಲಿರುವ ಹವಳ ಮಾತನಾಡುತ್ತೋ ಆ ಮಹಿಳೆಯ ಪತಿಯ ಜೀವಕ್ಕೆ ತೊಂದರೆಯಾಗುತ್ತೆ ಎಂಬ ವದಂತಿ ಹಬ್ಬಿದೆ.

ಇದನ್ನೇ ನಂಬಿದ ಮುಗ್ದ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟು ಮಾಂಗಲ್ಯ ಪೂಜೆ ಮಾಡಿ ಮಾಂಗಲ್ಯ ಸರದಲ್ಲಿನ ಹವಳಗಳನ್ನ ಒಡೆದು ಹಾಕಿದ್ದಾರೆ. ದಾವಣಗೆರೆ, ಬಳ್ಖಾರಿ ಕೊಪ್ಪಳ, ದಾವಣಗೆರೆ ಮತ್ತು ಚಿತ್ರದುರ್ಗದ ಹಲವು ಹಳ್ಳಿಗಳಲ್ಲಿ ಈ ವದಂತಿ ಹಬ್ಬಿದ್ದು, ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ.

ಅಷ್ಟೇ ಅಲ್ಲ, ಅಲ್ಲಿ ಹಾಗಾಯಿತಂತೆ, ಇಲ್ಲಿ ಹೀಗಾಯಿತಂತೆ ಎಂಬ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಭಯಪಟ್ಟ ಮಹಿಳೆಯರು ಸಂಬಂಧಿಕರಿಗೂ ಕರೆ ಮಾಡಿ ಸುದ್ದಿ ಹಬ್ಬಿಸಿದ್ದಾರೆ. ಈ ವದಂತಿ ಸಮೂಹ ಸನ್ನಿಯಾಗಿದ್ದು, ಇದರಿಂದ ಯಾವುದೇ ತೊಂದರೆಯಿಲ್ಲ ಭಯಬೇಡ ಎನ್ನುತ್ತಿದ್ದಾರೆ ಪ್ರಜ್ಞಾವಂತರು.


Share this Story:

Follow Webdunia kannada

ಮುಂದಿನ ಸುದ್ದಿ

ನವವಿವಾಹಿತರಿಗೆ ಕಾಂಡೋಮ್ ಗಿಫ್ಟ್