Select Your Language

Notifications

webdunia
webdunia
webdunia
webdunia

ಇದೇ ಕಾರಣಕ್ಕೆ ಡಿವೈಎಸ್ ಪಿ ಲಕ್ಷ್ಮೀ ಸಾವಾಯಿತೇ?!

ಇದೇ ಕಾರಣಕ್ಕೆ ಡಿವೈಎಸ್ ಪಿ ಲಕ್ಷ್ಮೀ ಸಾವಾಯಿತೇ?!
ಬೆಂಗಳೂರು , ಶುಕ್ರವಾರ, 18 ಡಿಸೆಂಬರ್ 2020 (09:10 IST)
ಬೆಂಗಳೂರು: ಡಿವೈಎಸ್ ಪಿ ಲಕ್ಷ್ಮೀ ಸಾವಿಗೆ ನಿಜವಾದ ಕಾರಣವೇನೆಂದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಲಕ್ಷ್ಮೀಗೆ ಪೊಲೀಸ್ ಇಲಾಖೆಯಲ್ಲಿದ್ದ ಇನ್ನೊಬ್ಬ ಅಧಿಕಾರಿ ಜತೆಗಿನ ಸ್ನೇಹದ ವಿಚಾರವಾಗಿ ಸಹೋದರಿ ಜತೆ ಕಿತ್ತಾಟವಾಗಿತ್ತು. ಇದೇ ಅವರ ಸಾವಿಗೆ ಕಾರಣವಾಯ್ತು ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.


ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟ್ ಹುದ್ದೆಯಲ್ಲಿದ್ದ ಪುರುಷ ಅಧಿಕಾರಿ ಜತೆಗೆ ಲಕ್ಷ್ಮೀಗೆ ಸ್ನೇಹ ಸಲುಗೆಯಿತ್ತು. ಇದೇ ವಿಚಾರಕ್ಕೆ ಅವರ ಸಹೋದರಿ ಅವರ ಜತೆ ಕಿತ್ತಾಡಿದ್ದರು. ಈ ಗಲಾಟೆಯ ಬಳಿಕ ಆ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ. ಈ ಎಲ್ಲಾ ಘಟನೆಗಳು ಆಕೆಗೆ ತನ್ನನ್ನು ನಂಬಿದವರೇ ವಂಚನೆ ಮಾಡುತ್ತಿದ್ದಾರೆ ಎಂಬ ಬೇಸರ ಕಾಡುತ್ತಿತ್ತು ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಲ್ಲದ ದಂಪತಿ ಕರುವನ್ನು ದತ್ತು ತೆಗೆದುಕೊಂಡು ಭರ್ಜರಿಯಾಗಿ ನಾಮಕರಣ ಮಾಡಿದರು!