Select Your Language

Notifications

webdunia
webdunia
webdunia
webdunia

ಸಾವಿಗೆ ಕಾರಣವಾದ ಫೇಸ್‌ಬುಕ್ ಸ್ನೇಹ

ಸಾವಿಗೆ ಕಾರಣವಾದ ಫೇಸ್‌ಬುಕ್ ಸ್ನೇಹ
ಬೆಂಗಳೂರು , ಸೋಮವಾರ, 1 ಆಗಸ್ಟ್ 2016 (07:35 IST)
ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಜತೆ  ದೂರವಾಣಿ ಸಂಭಾಷಣೆ ನಡೆಸುತ್ತಿದ್ದ ಯುವಕನನ್ನು ಯುವತಿಯ ಸ್ನೇಹಿತ ಕೊಲೆ ಮಾಡಿ ಹೂತಿಟ್ಟ ಹೇಯ ಘಟನೆ ವಿಲ್ಸನ್ ಗಾರ್ಡನ್ ‌ನಲ್ಲಿ ನಡೆದಿದೆ.

ಚನ್ನಪಟ್ಟಣ ಮೂಲದ ಯೋಗೀಶ್( 27)ಕೊಲೆಯಾದ ದುರ್ದೈವಿಯಾಗಿದ್ದು ಆರೋಪಿಯನ್ನು ಜಯನಗರದ ಪ್ರತಾಪ್(27) ಎಂದು ಗುರುತಿಸಲಾಗಿದೆ.

ಜಯನಗರದ 6 ನೇ ಬ್ಲಾಕ್‌ನಲ್ಲಿರುವ ಅಕ್ಕನ ಮನೆಯಲ್ಲಿ ವಾಸವಾಗಿದ್ದ ಯೋಗೀಶ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ  ಮಾಡುತ್ತಿದ್ದ. ಜುಲೈ 19 ರಂದು ಮನೆಯಿಂದ ಹೊರಗೆ ಹೋದವನು ಹಿಂತಿರುಗಿ ಬಂದಿರಲಿಲ್ಲ. ಈ ಸಂಬಂಧ ಜುಲೈ 21 ರಂದು ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಯೋಗೀಶ್ ಸಾವಿನ ರಹಸ್ಯವನ್ನು ಬಯಲು ಮಾಡುವಲ್ಲಿ ಯಶ ಕಂಡಿದ್ದಾರೆ.

ಯೋಗೀಶ್ ಯುವತಿಯೊಬ್ಬಳ ಜತೆ ಫೇಸ್‌ಬುಕ್‌ನಲ್ಲಿ ಚಾಟಿಂಗ್, ಫೋನ್ ಸಂಭಾಷಣೆ ನಡೆಸುತ್ತಿದ್ದ. ಇದು ಆಕೆಯ ಸ್ನೇಹಿತ ಪ್ರತಾಪ್‌ನ ಕೋಪಕ್ಕೆ ಕಾರಣವಾಗಿದೆ. ನನ್ನ ಹುಡುಗಿಯ ಸುದ್ದಿಗೆ ಬರಬೇಡ ಎಂದು ಎಷ್ಟು ಬಾರಿ ಹೇಳಿದರೂ ಕೇಳದ ಯೋಗೀಶ್‌ನ್ನು ಕೊಲ್ಲಲು ನಿರ್ಧರಿಸಿದ ಪ್ರತಾಪ್ ಆತನನ್ನು ಅಪಹರಿಸಿ ಮಾಗಡಿ ತಾಲ್ಲೂಕಿನ ಅತ್ತಿಗೆರೆ ಗ್ರಾಮದಲ್ಲಿರುವ ತೋಟದ ಮನೆಗೆ ಕರೆದೊಯ್ದು ಸ್ನೇಹಿತರ ಜತೆ ಸೇರಿ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದಾನೆ.

ಮುಖ್ಯ ಆರೋಪಿ ಪ್ರತಾಪ್‌ನನ್ನು ಬಂಧಿಸಿರುವ ಪೊಲೀಸರು ಆತನ ಸ್ನೇಹಿತರಿಗಾಗಿ ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಿಎಂ ಪುತ್ರನ ಅಂತ್ಯಕ್ರಿಯೆ