ಇನ್ಮುಂದೆ ಪಡಿತರ ಮಾದರಿಯಲ್ಲಿ ಕುಡಿಯುವ ನೀರು!

Webdunia
ಬುಧವಾರ, 22 ಫೆಬ್ರವರಿ 2017 (09:42 IST)
ಬೆಂಗಳೂರು: ಇನ್ಮುಂದೆ ಕುಡಿಯೋ ನೀರು ಪಡಿತರ ಮಾದರಿಯಲ್ಲಿ...!

ಅಬ್ಬಾ..! ಇಂಥದ್ದೊಂದು ದಿನಗಳು ಎದುರಾಗುತ್ತವೆ ಎಂದು ಬೆಂಗಳೂರಿನ ಮಹಾನಗರ ಜನತೆ ಖಂಡಿತ ಊಹಿಸಿರಲಾರರು. ಪ್ರಸ್ತುತ ವರ್ಷ ಭೀಕರ ಬರ ತಲೆದೋರಿದ್ದು, ಕಾವೇರಿ ಕೊಳ್ಳದಲ್ಲಿ ನೀರು ಬರಿದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದ್ದ ನೀರನ್ನೇ ಎಪ್ರಿಲ್, ಮೇ ತಿಂಗಳವರೆಗೆ ಸಾರ್ವಜನಿಕರಿಗೆ ಪೂರೈಕೆ ಮಾಡಲು ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾವೇರಿ ನಿಗಮ ಹಾಗೂ ಬೆಂಗಳೂರಿನ ಜಲಮಂಡಳಿ ಅಧಿಕಾರಿಗಳು ಸಭೆ ಸೇರಿ, ಪಡಿತರ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚಿಸಿದ್ದಾರೆ.
 
ತೀವ್ರ ಬರಗಾಲದಿಂದಾಗಿ ಜಲಾಶಯಗಳು ಬರಿದಾಗುತ್ತಿದ್ದು, ಕಾವೇರಿ ನದಿ ನೀರನ್ನು ಆಶ್ರಯಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ‘ಪಡಿತರ ಮಾದರಿ ವ್ಯವಸ್ಥೆ’ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.
 
ಬೆಂಗಳೂರು ಮಹಾನಗರಕ್ಕೆ ಮೇ ಅಂತ್ಯದವರೆಗೆ ನೀರು ಪೂರೈಸಲು ಪ್ರತಿದಿನ 6 ಕ್ಯುಸೆಕ್'ನಂತೆ ಸುಮಾರು 3 ಟಿಎಂಸಿ ನೀರು ಬೇಕಾಗುತ್ತದೆ. ಸದ್ಯ 9ಟಿಎಂಸಿ ನೀರು ಕೆಆರ್‌ಎಸ್‌ ಜಲಾಶಯದಲ್ಲಿ ಲಭ್ಯವಿದ್ದು, ಪ್ರತಿ ತಿಂಗಳು 2.4 ಟಿಎಂಸಿ ನೀರು ಬೇಕಾಗುತ್ತದೆ. ಅಷ್ಟೊಂದು ಪ್ರಮಾಣದ ನೀರು ಲಭ್ಯವಿರದ ಕಾರಣ, ಎಲ್ಲರಿಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ 'ನಿರ್ದಿಷ್ಟ ಪ್ರಮಾಣ ಮತ್ತು ಅವಧಿ'ಯವರೆಗೆ ಪಡಿತರ ಮಾದರಿಯಲ್ಲಿ ನೀರು ಪೂರೈಸಲು ಚಿಂತನೆ ನಡೆದಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಇರಾನ್ ಗೆ ಸಹಾಯ ಮಾಡಲು ಮನೆಯಲ್ಲಿದ್ದ ಚಿನ್ನ, ಹಣ ಕೊಟ್ಟ ಕಾಶ್ಮೀರಿ ಮುಸ್ಲಿಮರು

ಸಚಿವ ಶಿವರಾಜ್ ತಂಗಡಗಿ ದಿಡೀರ್ ಆಸ್ಪತ್ರೆಗೆ ದಾಖಲು

ಹೊರ್ಮುಜ್ ಜಲಸಂಧಿ ದಾಟಬೇಕಾದರೆ ಇರಾನ್ ಷರತ್ತಿಗೆ ಇತರೆ ರಾಷ್ಟ್ರಗಳು ಶಾಕ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಮಗೆ ಈ ಇಷ್ಟದ ಐಟಂ ಸಿಗಲ್ಲ: ಇದಕ್ಕೆಲ್ಲಾ ಗ್ಯಾಸ್ ಸಿಲಿಂಡರ್ ಕಾರಣ

Karnataka Weather: ಈ ವಾರ ರಾಜ್ಯದಲ್ಲಿ ಮಳೆಯಿರುತ್ತಾ ಇಲ್ಲಿದೆ ವಾರದ ಹವಾಮಾನ ವರದಿ

ಮುಂದಿನ ಸುದ್ದಿ
Show comments