Select Your Language

Notifications

webdunia
webdunia
webdunia
webdunia

ಕರಾವಳಿ ಭಾಗದಲ್ಲಿ ಇಂದೇ ರಂಜಾನ್ ಆಚರಣೆ

ಕರಾವಳಿ ಭಾಗದಲ್ಲಿ ಇಂದೇ ರಂಜಾನ್ ಆಚರಣೆ
ಮಂಗಳೂರು , ಭಾನುವಾರ, 25 ಜೂನ್ 2017 (15:58 IST)
ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪವಿತ್ರ ರಂಜನಾ ಹಬ್ಬವನ್ನ ಇಂದೇ ಆಚರಿಸಲಾಗುತ್ತಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಸೀದಿಗಳಿಗೆ ತೆರಳಿ ಮುಸ್ಲಿಂ ಬಾಂಧವರು ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಾವುಟ ಗುಡ್ಡೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಮುಸಲ್ಮಾನ್ ಬಾಂಧವರು ಈದ್ ಮಿಲಾದ್ ಪ್ರಯುಕ್ತ ವಿಶಿಷ್ಟ ಪ್ರಾರ್ಥನೆ ಮಾಡಿದರು. ಆಹಾರ ಸಚಿವ ಯು.ಟಿ. ಖಾದರ್ ಸಹ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಸದ್ಯ, ದಕ್ಷಿಣ ಕನ್ನಡದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಜಿಲ್ಲೆಯ ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾಳೆ ರಂಜಾನ್ ಪ್ರಯುಕ್ತ ಸರ್ಕಾರಿ ರಜೆ ಕೂಡ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಚುಚ್ಚಿಕೊಂಡ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ 33ನೇ ಮನ್ ಕಿ ಬಾತ್