Select Your Language

Notifications

webdunia
webdunia
webdunia
webdunia

ರಾಮಲಲ್ಲಾ ಶಿಲ್ಪಿಗೆ ರಾಜಭವನದಲ್ಲಿ ಸನ್ಮಾನ

ರಾಮಲಲ್ಲಾ ಶಿಲ್ಪಿಗೆ ರಾಜಭವನದಲ್ಲಿ ಸನ್ಮಾನ

geetha

bangalore , ಸೋಮವಾರ, 29 ಜನವರಿ 2024 (20:25 IST)
ರಾಮಲಲ್ಲಾ
ಬೆಂಗಳೂರು : ರಾಮಲಲ್ಲಾ ಪ್ರತಿಮೆಯನ್ನು ನಿರ್ಮಿಸಿದ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ರಾಜಭವನದಲ್ಲಿ ಸನ್ಮಾನಿಸಿದ್ದಾರೆ. ಕುಟುಂಬ ಸಮೇತರಾಗಿ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅರುಣ್‌ ಯೋಗಿರಾಜ್‌ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಗೌರವ ಸಮರ್ಪಿಸಿದರು. ಜೊತೆಗೆ ರಾಮಲಲ್ಲಾ ಮೂರ್ತಿಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. 
 
ಇದೇ ವೇಳೆ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರೂ ಸಹ ಅರುಣ್‌ ಯೋಗಿರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದರು.ಕಳೆದ ವಾರ ಜ. 22 ರಂದು ಅಯೋಧ್ಯೆಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಅರುಣ್‌ ಯೋಗಿರಾಜ್‌ ನಿರ್ಮಿಸಿದ ರಾಮಲಲ್ಲಾ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ -ಜೆಡಿಎಸ್‌ ನಾಯಕರನ್ನು ಬಂಧಿಸಿದ ಪೊಲೀಸರು