Select Your Language

Notifications

webdunia
webdunia
webdunia
webdunia

ಜಾತಿ ರಾಜಕಾರಣ ಮಾಡಿದವರು ಮುಂದೆ ಬರಲ್ಲ: ಬಿಎಸ್‌ವೈಗೆ ಜಾರಕಿಹೊಳಿ ಟಾಂಗ್

ಜಾತಿ ರಾಜಕಾರಣ ಮಾಡಿದವರು ಮುಂದೆ ಬರಲ್ಲ: ಬಿಎಸ್‌ವೈಗೆ ಜಾರಕಿಹೊಳಿ ಟಾಂಗ್
ಗೋಕಾಕ್ , ಗುರುವಾರ, 13 ಏಪ್ರಿಲ್ 2017 (18:01 IST)
ಜಾತಿ ರಾಜಕಾರಣ ಮಾಡಿದವರು ಎಂದೂ ಮುಂದೆ ಬರಲ್ಲ. ದೇಶದ ಜನತೆ ಬುದ್ದಿವಂತರಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ನನ್ನ ಮನೆ ಮೇಲೆ ದಾಳಿ ನಡೆದಾಗ ಯಡಿಯೂರಪ್ಪ ಬೊಬ್ಬೆ ಹಾಕಿದ್ದರು. ಉಪಚುನಾವಣೆ ಫಲಿತಾಂಶದ ನಂತರ ಏನು ಹೇಳ್ತಾರೆ ಎಂದು ತಿರುಗೇಟು ನೀಡಿದ್ದಾರೆ.
 
ಮುಂದಿನ ಚುನಾವಣೆಯಲ್ಲಿ ಮಿಷನ್ 150 ನಡೆಯುವುದಿಲ್ಲ. ಜಾತಿಯ ಹಿಂದೆ ಹೋದವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಬಿಜೆಪಿಗೆ ಇದೇ ಗತಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
 
ಕಾಂಗ್ರೆಸ್ ಸರಕಾರದಿಂದ ಜನತೆ ಬೇಸತ್ತಿದ್ದಾರೆ. ಇಂತಹ ದುರಾಡಳಿತವನ್ನು ಕಿತ್ತೊಗೆಯಲು ಜನತೆ ಬಯಸಿದ್ದಾರೆ. ಇದೊಂದು ಭ್ರಷ್ಟ ಸರಕಾರ ಎಂದು ಟೀಕಿಸುತ್ತಿದ್ದ ಯಡಿಯೂರಪ್ಪ ಅವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಸೋಲಿಗೆ ಆಳಿಗೊಂದರಂತೆ ಕಲ್ಲು ಹೊಡೆಯಬೇಡಿ; ಪ್ರತಾಪ್ ಸಿಂಹ ಮನವಿ