Select Your Language

Notifications

webdunia
webdunia
webdunia
webdunia

ಮಳೆಯ ಕೊರತೆ: ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ

karnataka tempature
ಬೆಂಗಳೂರು: ನಿರಂತರ ಮಳೆಯ ಕೊರತೆ ಮತ್ತು ತಾಪಮಾನದಲ್ಲಿನ ತೀವ್ರ ಏರಿಕೆಯಿಂದಾಗಿ ಕರ್ನಾಟಕವು ಬಿಗಡಾಯಿಸುತ್ತಿರುವ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. 

ಬೆಂಗಳೂರು ಹಾಗೂ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನವು 4 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಮತ್ತು ಮುಂದಿನ ವಾರ ರಾಜ್ಯದ ಕೆಲವು ಭಾಗಗಳಲ್ಲಿ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷಿಸಲಾಗಿದೆ. 

ಕರ್ನಾಟಕ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ಮಳೆಯ ಕೊರತೆಯು ತೀವ್ರಗೊಂಡಿದೆ. ಕೆಲವು ಪ್ರದೇಶಗಳು ಪ್ರವಾಹ ಮತ್ತು ಅದರಿಂದ ಉಂಟಾದ ಅಡಚಣೆಗಳಿಗೆ ತುತ್ತಾಗಿದ್ದರೆ, ದೇಶದ ಬಹುತೇಕ ಭಾಗಗಳು ಅಸಮರ್ಪಕ ಮಳೆಯಿಂದಾಗಿ ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಮಳೆಗಾಲ ಮುಂದುವರಿದಿದ್ದರೂ, ತಾಪಮಾನವು ತೀವ್ರವಾಗಿ ಏರುತ್ತಿದೆ. ಸೆಪ್ಟೆಂಬರ್ ಆರಂಭದಲ್ಲೇ ಬೇಸಿಗೆಯಂತಹ ವಾತಾವರಣ ನಿರ್ಮಾಣವಾಗಿದ್ದು, ತೀವ್ರ ಬಿಸಿಲಿನಿಂದಾಗಿ ಜನರು ಪರದಾಡುವಂತಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

SIR, ರಾಜ್ಯದಲ್ಲಿ 43.81ಲಕ್ಷ ಮತದಾರರಿಗೆ ಚುನಾವಣಾ ನೋಟಿಸ್‌