ಮಹಾನಗರದಲ್ಲಿ ಬೆಂಬಿಡದೇ ಮಳೆ

Webdunia
ಭಾನುವಾರ, 17 ಅಕ್ಟೋಬರ್ 2021 (22:40 IST)
ಮಹಾನಗರದಲ್ಲಿ ಬೆಂಬಿಡದೇ ಮಳೆಯಾಗುತ್ತಿದ್ದು, ಭಾನುವಾರವೂ ಕೂಡ ಮುಂದುವರಿದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 74 ಮಿ.ಮೀ ಮಳೆ ದಾಖಲಾಗಿದೆ.
ನಗರದ ಹಲವು ಭಾಗಗಳಲ್ಲಿ ಭಾನುವಾರ ಗುಡುಗು ಸಹಿತ ಜೋರು ಮಳೆಯಾಗಿದೆ. ಉಳಿದಂತೆ, ಬಹುತೇಕ ಎಲ್ಲ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.  ಮಳೆಯಿಂದ ಹಲವು ರಸ್ತೆ ಹಾಗೂ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ಥವ್ಯಸ್ಥವಾಗಿದೆ.
ನಂದಿನಿ ಬಡಾವಣೆ, ಗಾಯತ್ರಿನಗರ, ದಾಸರಹಳ್ಳಿ, ನಾಗಸಂದ್ರ, ಚೊಕ್ಕಸಂದ್ರ, ಆರ್.ಆರ್.ನಗರ, ಸಾರಕ್ಕಿ, ಕೆಂಗೇರಿ, ಹೆಮ್ಮಿಗೆಪುರ, ಪಟ್ಟಣಗೆರೆ, ಬಿಇಎಂಎಲ್ ಲೇಔಟ್, ನಾಗರಭಾವಿ, ಅಗ್ರಹಾರದಾಸರಹಳ್ಳಿ, ಗಾಳಿ ಆಂಜನೇಯ ದೇಗುಲ, ವಿದ್ಯಾಪೀಠ, ಅಂಜನಪುರ, ಬೊಮ್ಮನಹಳ್ಳಿ, ಕಾಟನಪೇಟ್, ರೇಸ್ ಕೋರ್ಸ್ ರಸ್ತೆ, ವಿಶ್ವೇಶ್ವರಪುರಂ, ಲಕ್ಕಸಂದ್ರ, ಕೋರಮಂಗಲ, ದೊಮ್ಮಲೂರು, ಶಿವಾಜಿನಗರ, ಹಲಸೂರು, ಬೆನ್ನಿಗಾನಹಳ್ಳಿ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಭಾರಿ ಮಳೆಗೆ ರಸ್ತೆ ಹಾಗೂ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದರು.
ಮುಂದಿನ ಎರಡು ದಿನ ಮಳೆ:
ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
ಎಲ್ಲೆಲ್ಲಿ ಎಷ್ಟೆಷ್ಟು ಮಳೆ:
ವಿಮಾನ ನಿಲ್ದಾಣ 74 ಮಿ.ಮೀ., ಆರ್ ಆರ್ ನಗರ 39 ಮಿ.ಮೀ, ಶಿವನಗರ 32 ಮಿ.ಮೀ., ಕಾಟನ್ ಪೇಟೆ 10.5 ಮಿ.ಮಿ., ನಾಗಾಪುರ 20.5 ಮಿ.ಮೀ., ಹಂಪಿನಗರ 11 ಮಿ.ಮೀ., ಎಚ್.ಗೊಲ್ಲಹಳ್ಳಿ 40ಮಿ.ಮೀ., ಬೊಮ್ಮನಹಳ್ಳಿ 15.5 ಮಿ.ಮೀ., ಕೋರಮಂಗಲ 24ಮಿ.ಮೀ., ಸಾರಕ್ಕಿ 25ಮಿ.ಮೀ., ಕೆಂಗೇರಿ 28 ಮಿ.ಮೀ., ಹೆಮ್ಮಿಗೆಪುರ 24 ಮಿ.ಮೀ., ಕೆ.ಜೆ.ಹಳ್ಳಿ 30 ಮಿ.ಮೀ., ಸುಳೇಕೆರೆ 28 ಮಿ.ಮೀ., ತಾವರಿಗೆರೆ 10 ಮಿ.ಮೀ., ಚನ್ನೇನಹಳ್ಳಿ 39.5 ಮಿ.ಮೀ., ಉತ್ತರ ಹಳ್ಳಿ 44‌ ಮಿ.ಮೀ., ಅಂಜನಾಪುರ 17 ಮಿ.ಮೀ., ಪುಲಕೇಶಿ ನಗರ 23.5 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದ ಸಿಬ್ಬಂದಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭ್ರಮದ ವಾತಾವರಣ, ಕಾರಣ ಏನ್ ಗೊತ್ತಾ

ಗರ್ಭಿಣಿ ಪತ್ನಿಯನ್ನು ಕೊಂದು ಕೊಲೆ ನಾಟಕವಾಡಿದ ಪತಿ, ಸಿಕ್ಕಿಬಿದ್ದಿದ್ದು ಹೇಗೇ ಗೊತ್ತಾ

ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಇಸ್ರೋದ ನಿವೃತ್ತ ಉದ್ಯೋಗಿ, ಕಾರಣ ಕೇಳಿದ್ರೆ ಶಾಕ್‌

ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ: ಎಸ್ಆರ್ ವಿಶ್ವನಾಥ್

ಮಾಧ್ಯಮಗಳಿಗೆ ನಿರ್ಬಂಧ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments