Webdunia - Bharat's app for daily news and videos

Install App

ಇಂದಿನಿಂದ 29 ರವರೆಗೆ ರಾಜ್ಯದ ಹಲವೆಡೆ ಮಳೆ

Webdunia
ಸೋಮವಾರ, 26 ಜೂನ್ 2023 (14:52 IST)
ಬೆಂ,ನಗರ, ಬೆಂ,ಗ್ರಾಮಾಂತರ ಜಿಲ್ಲೆಯಲ್ಲಿ ಇಂದಿನಿಂದ 29ರವರೆಗೆ ಮಳೆಯಾಗಲಿದೆ.ನಗರದಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ.ಬೆಂ,ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂ 26 ರಿಂದ 29ರವರೆಗೆ ಮಳೆಯಾಗುವ ಸಾಧ್ಯತೆ ಇದೆ.ಜೂ.26ರಂದು ಮೋಡ ಮುಸುಕಿದ ವಾತಾವರಣ, ಗುಡುಗು, ಮಿಂಚು ಮತ್ತು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 
ಬಲವಾದ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದು, ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿ ಯಸ್ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಇನ್ನೂ ನಗರದಲ್ಲಿ  ನಿನ್ನೆ ಸುರಿದ ಮಳೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.ಸಂಜೆಯಾಗ್ತಿದಂತೆ  ಕೆಲವು ಕಡೆಗಳಲ್ಲಿ ಮಳೆ ಸುರಿಯಿತು. ಬಾಗಲಗುಂಟೆ, ಪೀಣ್ಯ, ನಂದಿನಿ ಲೇಔಟ್, ಮಾರಪ್ಪ ಪಾಳ್ಯ, ವಿದ್ಯಾರಣ್ಯಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.
 
 
ಇನ್ನೂ ನಗರದಲ್ಲಿ ಎಲ್ಲೇಲ್ಲಿ ಎಷ್ಟು ಮಳೆಯಾಗಿದೆ ಅಂತಾ ನೋಡುವುದಾದ್ರೆ
 
• ಪೀಣ್ಯ ಕೈಗಾರಿಕಾ ಪ್ರದೇಶ - 29.50 ಮಿ.ಮೀ
•  ಬಾಗಲಗುಂಟೆ  - 28.50 ಮಿ.ಮೀ
•  ಶೆಟ್ಟಿಹಳ್ಳಿ - 27.50 ಮಿ.ಮೀ
• ದೊಡ್ಡಬಿದರೆಕಲ್ಲು - 25.50 ಮಿ.ಮೀ
• ನಂದಿನಿ ಲೇಔಟ್  ಮತ್ತು ನಾಗ ಪುರ - 21 ಮಿ.ಮೀ
•  ಕೊಟ್ಟಿಗೆಪಾಳ್ಯ - 20.50 ಮಿ.ಮೀ
• ಹೆಗ್ಗನಹಳ್ಳಿ ಮತ್ತು ರಾಜಮಹಲ್ ಗುಟ್ಟಹಳ್ಳಿ ತಲಾ -  18 ಮಿ.ಮೀ
• ಹೊರಮಾವು - 13.50 ಮಿ.ಮೀ
• ಹೆರೋಹಳ್ಳಿ - 13.50 ಮಿ.ಮೀ
• ದಯಾನಂದನಗರ, ರಾಜಾಜಿನಗರ ತಲಾ - 13 ಮಿ. ಮೀ
• ಮಾರಪ್ಪಪಾಳ್ಯ, ವಿದ್ಯಾರಣ್ಯಪುರ ತಲಾ - 11.50 ಮಿ.ಮೀ
•  ಜಕ್ಕೂರು, ಯಲಹಂಕ ತಲಾ - 10.50 ಮಿ.ಮೀ 
• ಕೊಡಿಗೇಹಳ್ಳಿ, ಬಾಣಸ ವಾಡಿ ತಲಾ - 10 ಮಿ.ಮೀ ಮಳೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments