Webdunia - Bharat's app for daily news and videos

Install App

'ವಿನಾಶಕಾಲೇ ವಿಪರೀತ ಬುದ್ಧಿ' ಎಂಬಂತೆ ರಾಹುಲ್ ವರ್ತಿಸುತ್ತಿದ್ದಾರೆ: ಆರ್.ಅಶೋಕ್

Sampriya
ಮಂಗಳವಾರ, 19 ಮಾರ್ಚ್ 2024 (13:15 IST)
ಬೆಂಗಳೂರು: ಶಕ್ತಿಯನ್ನು ವಿನಾಶ ಮಾಡುವುದಕ್ಕಾಗಿ ಇಂಡಿ ಮೈತ್ರಿಕೂಟವನ್ನು ರಚಿಸಲಾಯಿತು ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 
 
ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡ ಅವರು, ನಮ್ಮ ಪರಂಪರೆಯಲ್ಲಿ ಶಕ್ತಿಗೆ ಮಾತೃ ಸ್ವರೂಪಿ ಸ್ಥಾನವಿದೆ. ಇಂತಹ ಶಕ್ತಿಯನ್ನು ವಿನಾಶ ಮಾಡಲು ಹೊರಟಿರುವ ರಾಹುಲ್ ಗಾಂಧಿ ನಡೆ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಎಂದಿದ್ದಾರೆ. 
 
 ಬೆಂಗಳೂರಿನ ಅಣ್ಣಮ್ಮದೇವಿಯಿಂದ
ಬೆಳಗಾವಿಯ ಸವದತ್ತಿ ಯಲ್ಲಮ್ಮನವರೆಗೆ
 
ಮೈಸೂರಿನ ಚಾಮುಂಡೇಶ್ವರಿಯಿಂದ
ಮಂಗಳೂರಿನ ಮಂಗಳಾದೇವಿವರೆಗೆ
 
ಕೋಲಾರದ ಕೋಲಾರಮ್ಮನಿಂದ
ಕಟೀಲು ದುರ್ಗಾಪರಮೇಶ್ವರಿವರೆಗೆ 
 
ಬಾದಾಮಿಯ ಬನಶಂಕರಿಯಿಂದ
ಸಿಗಂದೂರು ಚೌಡೇಶ್ವರಿವರೆಗೆ
 
ಹೊರನಾಡು ಅನ್ನಪೂರಣೇಶ್ವರಿಯಿಂದ
ಕೊಲ್ಲೂರು ಮೂಕಾಂಬಿಕೆವರೆಗೆ
 
ಕರ್ನಾಟಕದ ಉದ್ದಗಲಕ್ಕೂ ಶಕ್ತಿ ದೇವತೆಗಳ ಅನೇಕ ತೀರ್ಥಕ್ಷೇತ್ರಗಳಿವೆ, ಕನ್ನಡಿಗರು ಶಕ್ತಿಯ ಆರಾಧಕರಾಗಿದ್ದರೆ.
 
ನಮ್ಮ ಪರಂಪರೆಯಲ್ಲಿ ಶಕ್ತಿಗೆ ಮಾತೃ ಸ್ವರೂಪಿ ಸ್ಥಾನವಿದೆ. ಇಂತಹ ಶಕ್ತಿಯನ್ನು ವಿನಾಶ ಮಾಡುವ @RahulGandhi
 ಅವರ ಮಾತು ನೋಡಿದರೆ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments