Select Your Language

Notifications

webdunia
webdunia
webdunia
webdunia

ಕುಡ್ಲದ ಫಿಶ್ ಕರಿ ಬೇಡಪ್ಪಾ ಎಂದು ರಾಹುಲ್ ಗಾಂಧಿ ಪಕ್ಕಾ ಸಸ್ಯಾಹಾರ ಸೇವಿಸಿದ್ದು ಯಾಕೆ?!

ಕುಡ್ಲದ ಫಿಶ್ ಕರಿ ಬೇಡಪ್ಪಾ ಎಂದು ರಾಹುಲ್ ಗಾಂಧಿ ಪಕ್ಕಾ ಸಸ್ಯಾಹಾರ ಸೇವಿಸಿದ್ದು ಯಾಕೆ?!
ಮಂಗಳೂರು , ಬುಧವಾರ, 21 ಮಾರ್ಚ್ 2018 (09:32 IST)
ಮಂಗಳೂರು: ಕರಾವಳಿಗೆ ಎರಡು ದಿನಗಳ ಕಾಲ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದರು.

ಹೇಳಿ ಕೇಳಿ ಮಂಗಳೂರು, ಚಿಕನ್, ಫಿಶ್ ಕರಿಗಳಿಗೆ ಫೇಮಸ್ಸು. ರಾಹುಲ್ ಗಾಂಧಿ ಕೂಡಾ ನಾನ್ ವೆಜ್ ಪ್ರಿಯ. ಹಾಗಿದ್ದರೂ ಈ ಬಾರಿ ಅಪ್ಪಿ ತಪ್ಪಿಯೂ ತಮ್ಮ ಮುಂದೆ ನಾನ್ ವೆಜ್ ತರಬೇಡಿ. ಸ್ಥಳೀಯ ಸಸ್ಯಾಹಾರದ ಊಟ-ತಿಂಡಿಯನ್ನೇ ತಂದಿಡಿ ಎಂದು ರಾಹುಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರಂತೆ.

ಇದಕ್ಕೆ ಕಾರಣ ಕಳೆದ ಬಾರಿ ರಾಹುಲ್ ಕರ್ನಾಟಕ ಪ್ರವಾಸ ಮಾಡಿದ್ದಾಗ ಆದ ವಿವಾದ. ರಾಹುಲ್ ಉತ್ತರ ಕರ್ನಾಟಕದ ಕೆಲವು ಕಡೆ ಪ್ರವಾಸ ಮಾಡಿದ ಮೇಲೆ ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ವಿವಾದವೆಬ್ಬಿತ್ತು. ಇದೀಗ ಮಂಗಳೂರು ಭೇಟಿಯ ಸಂದರ್ಭ ರಾಹುಲ್ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಿವಾದವೇ ಬೇಡವೆಂದು ಮಾಂಸಾಹಾರ ಸೇವಿಸದಿರಲು ನಿರ್ಧರಿಸಿದ್ದಾರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಆರ್ ಎಸ್ಎಸ್ ಮೇಲೆ ರಾಹುಲ್ ಗಾಂಧಿ ಹೊಸ ಆರೋಪ