Publish Date: Mon, 12 Feb 2018 (09:54 IST)
Updated Date: Mon, 12 Feb 2018 (09:56 IST)
ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿ ವೀರಾವೇಷದ ಭಾಷಣ ಮಾಡುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಎಡವಟ್ಟೊಂದು ಇದೀಗ ವಿಪಕ್ಷಗಳಿಗೆ ಕಾಲೆಳೆಯಲು ಅಸ್ತ್ರವಾಗಿದೆ.
ಬಿಜೆಪಿ ಹಗರಣಗಳ ಬಗ್ಗೆ ಟೀಕೆ ಮಾಡುವ ಭರದಲ್ಲಿ ರಾಹುಲ್ ಗಾಂಧಿ ಅತ್ಯಾಚಾರದಲ್ಲೂ ಹಗರಣವಾಗಿದೆ ಎಂದಿದ್ದು ನಗೆಪಾಟಲಿಗೀಡಾಗಿದೆ.
ಈ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ‘ಶಾಸಕ ಮೇಟಿಗೆ ಕ್ಲೀನ್ ಚಿಟ್ ನೀಡಿದಾಗಲೇ ನಮಗೆ ಅನುಮಾನ ಬಂದಿತ್ತು, ಅತ್ಯಾಚಾರದಲ್ಲೂ ಹಗರಣವಾಗುತ್ತಿದೆ ಎಂದು’ ಎನ್ನುವ ಮೂಲಕ ಕಾಂಗ್ರೆಸ್ ಅಧ್ಯಕ್ಷರ ಕಾಲೆಳೆದಿದ್ದಾರೆ. ರಾಹುಲ್ ಗಾಂಧಿ ಹಲವು ಬಾರಿ ಇದೇ ರೀತಿ ಭಾಷಣದಲ್ಲಿ ಎಡವಟ್ಟು ಮಾಡಿ ನಗೆಪಾಟಲಿಗೀಡಾದ ಉದಾಹರಣೆಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ