Select Your Language

Notifications

webdunia
webdunia
webdunia
webdunia

ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಜನರ ಕಷ್ಟ ಆಲಿಸಿದ ಸಚಿವ ಆರ್.ಅಶೋಕ್

ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಜನರ ಕಷ್ಟ ಆಲಿಸಿದ ಸಚಿವ ಆರ್.ಅಶೋಕ್
ಹೊಸಕೆರೆಹಳ್ಳಿ , ಶನಿವಾರ, 24 ಅಕ್ಟೋಬರ್ 2020 (11:27 IST)
ಹೊಸಕೆರೆಹಳ್ಳಿ : ಹೊಸಕೆರೆ ಹಳ್ಳಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಜನರು ಪರದಾಟ ನಡೆಸುತ್ತಿದ್ದಾರೆ. ಇದೀಗ ಈ ಪ್ರದೇಶಕ್ಕೆ ಸಚಿವರು ಹಾಗೂ ಅಧಿಕಾರಿಗಳು ಧಾವಿಸಿದ್ದಾರೆ ಎನ್ನಲಾಗಿದೆ.

ಹೊಸಕೆರೆ ಹಳ್ಳಿ ದತ್ತಾತ್ರೇಯ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನರು ಮನೆಮಠ ಕಳೆದುಕೊಂಡು ಊಟ ವಸತಿ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಆದರೆ ಈ ಪ್ರದೇಶಕ್ಕೆ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಜನರ ಕಷ್ಟ ಆಲಿಸಲಿಲ್ಲ ಎಂದು ಆರೋಪಿಸಲಾಗಿತ್ತು.

ಆದರೆ ಇದೀಗ ಹೊಸಕೆರೆ ಹಳ್ಳಿ ದತ್ತಾತ್ರೇಯ ನಗರಕ್ಕೆ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇವರಿಗೆ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಹಾಗೇ ಮಳೆಯಿಂದ ಹಾನಿಯಾದ್ದರಿಂದ ಪ್ರದೆಶದಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಬಳಸಿ ಬಿಬಿಎಂಪಿ ಸಿಬ್ಬಂದಿಗಳಿಂದ  ಸ್ವಚ್ಛತಾ ಕಾರ್ಯ ಮಾಡಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಗೂಂಡಾ ರಾಜಕಾರಣಿ ಎಂದ ಬಿಜೆಪಿ ಸಂಸದೆ