Webdunia - Bharat's app for daily news and videos

Install App

ಸೋತರೆ ಇವಿಎಂ ದೋಷ, ಗೆದ್ದರೆ ಅಹಂ ಎನ್ನುವ ರೋಶವೇಷ: ಪರಮೇಶ್ವರ್‌ ಹೇಳಿಕೆಗೆ ಆರ್‌ ಅಶೋಕ್ ಕೌಂಟರ್‌

Sampriya
ಭಾನುವಾರ, 24 ನವೆಂಬರ್ 2024 (13:07 IST)
ಮುಂಬೈ: ಮಹಾರಾಷ್ಟ್ರದಲ್ಲಿ ಜನತೆ ನೀಡಿರುವ ಜನಾದೇಶವನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಪಕ್ಷ ಇವಿಎಂ ಮತ ಯಂತ್ರಗಳನ್ನು ದೂಷಣೆ ಮಾಡುತ್ತಿದೆ. ಆದರೆ ಇಲ್ಲಿ ಕರ್ನಾಟಕದ ಮೂರು ಉಪಚುನಾವಣೆಗಳ ಗೆಲುವು 2028ಕ್ಕೆ ದಿಕ್ಸೂಚಿ ಎಂದು ಹೇಳುತ್ತಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದರು.

ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದು, ಇವಿಎಂ ಇರುವವರೆಗೂ ಬಿಜೆಪಿಗೆ ಗೆಲುವು ಖಚಿತ ಎಂದು ಗೃಹಮಂತ್ರಿ ಪರಮೇಶ್ವರ್‌ ಹೇಳಿಕೆಗೆ ಅವರು ತಿರುಗೇಟು ನೀಡಿದರು.

ಈ ವಿಚಾರವಾಗಿ ಆರ್‌ ಅಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದರು. ಸೋತರೆ ಇವಿಎಂ ದೋಷ, ಗೆದ್ದರೆ ಅಹಂ ಎನ್ನುವ ರೋಶವೇಷ!

ಮಹಾರಾಷ್ಟ್ರದಲ್ಲಿ ಜನತೆ ನೀಡಿರುವ ಜನಾದೇಶವನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಪಕ್ಷ ಇವಿಎಂ ಮತ ಯಂತ್ರಗಳನ್ನು ದೂಷಣೆ ಮಾಡುತ್ತಿದೆ. ಆದರೆ ಇಲ್ಲಿ ಕರ್ನಾಟಕದ ಮೂರು ಉಪಚುನಾವಣೆಗಳ ಗೆಲುವು 2028ಕ್ಕೆ ದಿಕ್ಸೂಚಿ ಎಂದು ಹೇಳುತ್ತಿದೆ.

ಸೋತರೆ ಇವಿಎಂ ದೋಷ, ಗೆದ್ದರೆ ನಮ್ಮಿಂದಲೇ ಎನ್ನುವ ರೋಷವೇಶ. ಇದು ಕಾಂಗ್ರೆಸ್ ಪಕ್ಷದ ಲಜ್ಜೆಗೆಟ್ಟ ಎಡಬಿಡಂಗಿತನ.

ದೇಶದೆಲ್ಲೆಡೆ ಜನಮನ್ನಣೆ ಕಳೆದುಕೊಂಡು ಅಡ್ರೆಸ್ ಇಲ್ಲದಂತಾಗಿರುವ ಕಾಂಗ್ರೆಸ್‌  ಪಕ್ಷ ಮುಳುಗುತ್ತಿರುವ ಹಡಗು. ಈ ಮುಳುಗುತ್ತಿರುವ ದೋಣಿ ಕರ್ನಾಟಕದಲ್ಲೂ ಕಡೇ ದಿನಗಳನ್ನು ಎಣಿಸುತ್ತಿದ್ದು, ಶೀಘ್ರದಲ್ಲೇ ಪತನವಾಗಲಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಜ್ಞಾನ ಪಿಯು ಕಾಲೇಜಿನಲ್ಲಿ ಸಿಎ, ಸಿಎಸ್ ಫೌಂಡೇಶನ್ ಕೋರ್ಸ್ ಓರಿಯೆಂಟೇಶನ್ ಕಾರ್ಯಕ್ರಮ

ಮೊದಲ ಪಾಯಿಂಟ್‌ನಲ್ಲಿ ಬೆಳಗ್ಗೆಯಿಂದ ಮಣ್ಣು ಅಗೆದರು ಸಿಗದ ಕಳೆಬರಹ, ಧರ್ಮಸ್ಥಳ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್‌

ಧರ್ಮಸ್ಥಳ ಪ್ರಕರಣ: ದೂರುದಾರ ಗುರತಿಸಿದ ಜಾಗಗಳಲ್ಲಿ ಮೃತದೇಹಗಳಿಗೆ ಉತ್ಖನನ

Video: ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ಕೊಟ್ಟ ಚಿದಂಬರಂಗೆ ಬೆವರಿಳಿಸಿದ ಅಮಿತ್ ಶಾ: ವಿಡಿಯೋ

ವಿಜಯೇಂದ್ರನಿಂದ ನಾನು ಪಾಠ ಕಲಿಯಬೇಕಾ: ಸಿದ್ದರಾಮಯ್ಯ ರೋಷಾವೇಷ

ಮುಂದಿನ ಸುದ್ದಿ
Show comments