Webdunia - Bharat's app for daily news and videos

Install App

ಸಾಬರಿಗೆ ಎರಡೇ ಮಕ್ಕಳು ಸಾಕು ಅಂತ ಸಾಬರಿಗೆ ಸಿದ್ದರಾಮಯ್ಯ ಯಾಕೆ ಹೇಳಲ್ಲ: ಅಶೋಕ್

Krishnaveni K
ಸೋಮವಾರ, 13 ಜನವರಿ 2025 (14:59 IST)
ಬೆಂಗಳೂರು: ಸಾಬರಿಗೆ ಎರಡೇ ಮಕ್ಕಳು ಸಾಕು ಎನ್ನುವ ಧೈರ್ಯ ಸಿದ್ದರಾಮಯ್ಯನವರು ಯಾಕೆ ಮಾಡಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಒಂದು ಸಾಮೂಹಿಕ ಮದುವೆಯಲ್ಲಿ ನೀಡಿದ ಹೇಳಿಕೆ ಬಗ್ಗೆ ಆರ್ ಅಶೋಕ್ ಇಂದು ಟೀಕೆ ಮಾಡಿದ್ದಾರೆ. ‘ಸಿಎಂ ಸಿದ್ದರಾಮಯ್ಯ ಸಾಹೇಬ್ರು ನಿನ್ನೆ ಒಂದು ಹಿಂದೂಗಳ ಸಾಮೂಹಿಕ ಮದುವೆಗೆ ಹೋಗಿದ್ದಾರೆ. ಅಲ್ಲಿ ಹೋಗಿ ನೀವು ಎರಡೇ ಮಕ್ಕಳು ಮಾಡಿ. ಎರಡು ಮಕ್ಕಳ ಮೇಲೆ ಮಾಡಕ್ಕೆ ಹೋಗಬೇಡಿ, ನಿಮ್ಮ ಕೈಯಲ್ಲಿ ಸಾಕಕ್ಕಾಗಲ್ಲ ಎಂದು ಬುದ್ಧಿ ಹೇಳಿದ್ದಾರೆ.

ನಾನು ಸಿದ್ದರಾಮಯ್ಯನವರತ್ರ ಕೇಳ್ತೀನಿ, ನೀವು ಇದೇ ಮಾತನ್ನು ಸಾಬರಿಗೆ ಹೋಗಿ ಹೇಳಬೇಕಲ್ಲಾ? ನಿಮಗೆ ಒಂದೇ ಮಕ್ಕಳು ಸಾಕು. ನೀವು ಬಡತನದಲ್ಲಿದ್ದೀರಿ, ಓದಿಸಕ್ಕೆ ಆಗಲ್ಲ, ಮದುವೆ ಮಾಡಕ್ಕಾಗಲ್ಲ ಎಂದು ಯಾಕೆ ಹೇಳಲ್ಲ? ಅಂದರೆ ಸಿದ್ದರಾಮಯ್ಯನವರು ಹಿಂದೂಗಳ ಸಂಖ್ಯೆ ಕಡಿಮೆಯಾಗಬೇಕು, ಮುಸ್ಲಿಮರ ಸಂಖ್ಯೆ ಹೆಚ್ಚಾಗಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ.

ಯಾವ ನೈತಿಕತೆ ಇಟ್ಕೊಂಡು ಹಿಂದೂಗಳಿಗೆ ಈ ರೀತಿ ಹಿತವಚನ ಹೇಳ್ತೀರಿ? ಒಂದು ಧರ್ಮಕ್ಕೆ ಸುಣ್ಣ, ಒಂದು ಧರ್ಮಕ್ಕೆ ಬೆಣ್ಣೆ ಹಾಕೋದು. ಈ ಓಲೈಕೆ ರಾಜಕಾರಣ ಮಾಡಿದ್ದಕ್ಕೇ ಈವತ್ತು ಕರ್ನಾಟಕದ ಕಾನೂನು ಸುವ್ಯವಸ್ಥೆ ಹಾಳಾಗಿರೋದು’ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜಪೇಟೆಯಲ್ಲಿ ದನದ ಮೇಲೆ ನಡೆಸಿದ ಕ್ರೌರ್ಯದ ಬಗ್ಗೆ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವಾಗ ಈ ರೀತಿ ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಿದ್ದಕ್ಕೆ ರಮ್ಯಾಗೆ ಖುಷಿ

ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸಲು ನಮಗೆ ಗೊತ್ತಿದೆ:ಎ.ನಾರಾಯಣಸ್ವಾಮಿ

ಧರ್ಮಸ್ಥಳದಲ್ಲಿ ಅಗೆಯುವ ಸ್ಥಳದಲ್ಲಿ ಇವರಿಂದಲೇ ಪೊಲೀಸರಿಗೆ ದೊಡ್ಡ ಸಮಸ್ಯೆ

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೇ ಪ್ರಜ್ವಲ್ ರೇವಣ್ಣ ಏನು ಮಾಡಿದ್ರು

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಮುಂದಿನ ಸುದ್ದಿ
Show comments