Webdunia - Bharat's app for daily news and videos

Install App

ಶಬರಿಮಲೆ ಯಾತ್ರೆ ಬಳಿಕ ಮಾತು ಬರದವನಿಗೆ ಮಾತು ಬಂತು: ಪುತ್ತೂರಿನ ವ್ಯಕ್ತಿಗೆ ಪವಾಡ ಮಾಡಿದ ಅಯ್ಯಪ್ಪ

Krishnaveni K
ಶುಕ್ರವಾರ, 13 ಡಿಸೆಂಬರ್ 2024 (08:56 IST)
Photo Credit: Social media
ಪುತ್ತೂರು: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಎಷ್ಟೋ ಜನ ಎಂತೆಂಥದ್ದೋ ಹರಕೆ ಕಟ್ಟಿಕೊಂಡು ಮಾಲಾಧಾರಿಗಳಾಗಿ ಹೋಗಿ ಬರುತ್ತಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಮೆತ್ತಡ್ಕದ ಮೂಕನೊಬ್ಬ ಈಗ ಅಯ್ಯಪ್ಪನ ದರ್ಶನ ಮಾಡಿಕೊಂಡು ಬಂದ ಬಳಿಕ ಮಾತನಾಡಲು ಆರಂಭಿಸಿದ್ದಾನಂತೆ!

ಇಂತಹದ್ದೊಂದು ಪವಾಡಸದೃಶ ಘಟನೆ ನಡೆದಿದ್ದು, ಎಲ್ಲರೂ ಬೆರಗಾಗುವಂತೆ ಮಾಡಿದೆ. ಜೊತೆಗೆ ಅಯ್ಯಪ್ಪನ ಮೇಲಿನ ಭಕ್ತಿಯೂ ಹೆಚ್ಚುವಂತೆ ಮಾಡುತ್ತದೆ. ಪುತ್ತೂರಿನ ಪ್ರಸನ್ನ ಎಂಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ. ಈತ ಒಂದು ವರ್ಷಗಳ ಹಿಂದೆ ಮಾಲೆ ಧರಿಸಿ ಶಬರಿಮಲೆ ಏರಿದ್ದ. ಈ ಬಾರಿ ಮತ್ತೊಮ್ಮೆ ಮಾಲಾಧಾರಿಯಾಗಿ ಶಬರಿಮಲೆಗೆ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದ್ದಾನೆ.

ಮಾಲೆ ಧರಿಸಿದ ಸಂದರ್ಭದಲ್ಲಿ 48 ದಿನಗಳ ಕಾಲ ಕಠಿಣ ವ್ರತ ಆಚರಿಸಿದ್ದ. ಕಾಡಿನ ಹಾದಿಯಲ್ಲಿ ನಡೆದುಕೊಂಡೇ ಹೋಗಿ ಅಯ್ಯಪ್ಪನ ದರ್ಶನ ಮಾಡಿದ್ದ. ಈ ಮೊದಲು ಒಂದೇ ಒಂದು ಶಬ್ಧ ಮಾತನಾಡದೇ ಇದ್ದಿದ್ದ ಆತ ಅಯ್ಯಪ್ಪನ ದರ್ಶನ ಮಾಡಿದ ಬಳಿಕ ಚಿಕ್ಕಮಕ್ಕಳು ತೊದಲು ಮಾತು ಆರಂಭಿಸುವಂತೆ ಮಾತನಾಡಲು ಆರಂಭಿಸಿದ್ದಾನೆ.

ಈಗ ಆತ ಅಯ್ಯಪ್ಪ ಶರಣು ಎನ್ನುವಷ್ಟು ಮಾತನಾಡಲು ಕಲಿತಿದ್ದಾನೆ. ಮೊದಲ ಬಾರಿ ಮಾಲೆ ಧರಿಸಿದ್ದಾಗ ಕಿವುಡುತನ ದೂರವಾಗಿತ್ತು. ಎರಡನೇ ಬಾರಿ ಮಾಲೆ ಧರಿಸಿದಾಗ ತೊದಲು ಮಾತನಾಡಲು ಆರಂಭಿಸಿದ್ದಾನೆ. ಇನ್ನೊಮ್ಮೆ ಮಾಲೆ ಧರಿಸಿ ವ್ರತ ಮಾಡಿದರೆ ಇನ್ನಷ್ಟು ಚೆನ್ನಾಗಿ ಮಾತು ಕಲಿಯುತ್ತಾನೆ ಎಂಬ ನಂಬಿಕೆ ಅವನ ಕುಟುಂಬದಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments