Select Your Language

Notifications

webdunia
webdunia
webdunia
webdunia

ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ: ರೂಪಾ ತಂಬದ

ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ: ರೂಪಾ ತಂಬದ
ಬೆಂಗಳೂರು , ಶನಿವಾರ, 23 ಜುಲೈ 2016 (11:32 IST)
ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವಿಜಯ ನಗರ ಪೊಲೀಸ್ ಠಾಣೆಯ ಪಿಎಸ್‌ಐ ರೂಪಾ ತಂಬದ ಗಂಭೀರವಾಗಿ ಆರೋಪಿಸಿದ್ದಾರೆ.
 
ಇನ್ಸ್‌ಪೆಕ್ಟರ್ ಸಂಜೀವ್ ಗೌಡ ನಿರಂತರ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪಿಎಸ್‌ಐ ರೂಪಾ ತಂಬದ ಅವರು ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಅರುಣ್ ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ.
 
ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಅವರು ಆರೋಪಿಗಳು ಹಾಗೂ ಠಾಣೆಯ ಸಿಬ್ಬಂದಿಗಳ ಮುಂದೆ ಬಾಯಿಗೆ ಬಂದಂತೆ ನಿಂದಿಸಿದ್ದರಿಂದ ನನಗೆ ಮಾನಸಿಕ ಕಿರುಕುಳ ಉಂಟಾಗಿತ್ತು ಎಂದು ಆರೋಪಿಸಿದ್ದಾರೆ.
 
ಈ ಹಿಂದಿನ ಇನ್ಸ್‌ಪೆಕ್ಟರ್ ಅವರು ನನ್ನನ್ನು ಬಂದೋಬಸ್ತ್ ಹಾಗೂ ತನಿಖೆ ಎಂದು ಬೇರೆ ಬೇರೆ ಕರ್ತವ್ಯಗಳಿಗೆ ನೇಮಿಸುತ್ತಿದ್ದರು. ಆದರೆ, ಸಂಜೀವ್ ಗೌಡ ನನ್ನನ್ನು ಠಾಣೆಯಿಂದ ಹೊರಗಡೆ ಕಳುಹಿಸುತ್ತಿರಲಿಲ್ಲ. ನನ್ನ ಕರ್ತವ್ಯ ಠಾಣೆಯ ಒಳಗೆ ಸೀಮಿತವಾಗಿತ್ತು. ಹೀಗಾಗಿ ನಾನು ವರ್ಗಾವಣೆಯನ್ನು ಬಯಸಿದ್ದೆ ಎಂದು ಮಾಹಿತಿ ಪಿಎಸ್‌ಐ ರೂಪಾ ತಂಬದ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಚ್‌.ಡಿ.ರೇವಣ್ಣ ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ: ಎ.ಮಂಜು