Select Your Language

Notifications

webdunia
webdunia
webdunia
webdunia

ಪ್ರೊ.ಭಗವಾನ್, ಪ್ರೊ, ಮಹೇಶ್‌ಚಂದ್ರಗುರು ಸಮಾಜಕ್ಕೆ ಕಳಂಕ: ಪ್ರತಾಪ್ ಸಿಂಹ

ಪ್ರೊ.ಭಗವಾನ್, ಪ್ರೊ, ಮಹೇಶ್‌ಚಂದ್ರಗುರು ಸಮಾಜಕ್ಕೆ ಕಳಂಕ: ಪ್ರತಾಪ್ ಸಿಂಹ
ಮೈಸೂರು , ಸೋಮವಾರ, 26 ಜೂನ್ 2017 (12:59 IST)
ಪ್ರೊ.ಭಗವಾನ್ ಮತ್ತು ಪ್ರೊ, ಮಹೇಶ್ಚಂದ್ರಗುರು ಸಮಾಜಕ್ಕೆ ಕಳಂಕವಾಗಿದ್ದಾರೆ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
 
ಕಲಾಮಂದಿರದಲ್ಲಿ ಗೋಮಾಂ ಸೇವಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಹಿತಿಗಳೆಲ್ಲರು ಒಂದೆಡೆ ಸೇರಿ ಸಮಾಜದ ಸ್ವಾಸ್ಥಹಾಳು ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಪ್ರೊ. ಮಹೇಶ್‌ಚಂದ್ರ ಗುರು ಸರಕಾರಿ ಸೇವೆಯಲ್ಲಿದ್ದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಾಜ್ಯಪಾಲರು ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.  
 
ಸರಕಾರಿ ಸಭಾಂಗಣದಲ್ಲಿ ಮಾಂಸಹಾರ ಸೇವನೆಗೆ ನಿಷೇಧವಿದೆ. ಆದಾಗ್ಯೂ, ಸಾಹಿತಿಗಳು ಮಾಂಸಹಾರ ಸೇವನೆ ಮಾಡಿ ಕಾನೂನುಬಾಹಿರ ಕೃತ್ಯವೆಸಗಿದ್ದಾರೆ. ಇಂತಹ ಸಾಹಿತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.  

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಉದ್ದೇಶ: ಶೋಭಾ ಕರಂದ್ಲಾಜೆ