Webdunia - Bharat's app for daily news and videos

Install App

ಪುಸ್ತಕ ಖರೀಸಲು ಪೋಷಕರಿಗೆ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಗಳು

Webdunia
ಭಾನುವಾರ, 3 ಜುಲೈ 2022 (20:02 IST)
ನಗರದ ಖಾಸಗಿ ಶಾಲೆಗಳು ಹಣ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವಾಗೆ ಕಾಣುತ್ತೆ. ಇತ್ತೀಚೆಗೆ ಕೆಲವೊಂದು ಶಾಲೆಗಳು ಹಣದ ದುರಾಸೆಗೆ ಬಿದ್ದು ಪೋಷಕರ ರಕ್ತ ಹೀರಲು ಮುಂದಾಗಿದೆ. ಅಂದಹಾಗೆ ಶಾಲೆಯ ಪಠ್ಯಪುಸ್ತಕದಲ್ಲಿ ಹಣದ ದಂಧೆ ಎಸೆಗಲು ಖಾಸಗಿ ಶಾಲೆಗಳು ಶುರುಮಾಡಿದೆ.ಖಾಸಗಿ ಶಾಲೆಗಳ ಹಣದ ದುರಾಸೆಗೆ ಪೋಷಕರು ಬಲಿಪಾಶುಗಳಾಗ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಪೋಷಕರು ತಮ್ಮ ಮಕ್ಕಳನ್ನ ಪ್ರತಿಷ್ಠಿತ ಶಾಲೆಗೆ ಸೇರಿಸುತ್ತಾರೆ. ಉಳ್ಳವರು ಹೇಗೋ ಶಾಲೆಯ ಆಡ್ಮೀಷನ್ ಸೇರಿದಂತೆ ಪುಸ್ತಕದ ಹಣ, ಬ್ಯಾಗಿನ ಹಣ, ಶೂ ವಿನ ಹಣ ಎಲ್ಲವನ್ನ ಪಾವತಿ ಮಾಡ್ತಾರೆ. ಆದ್ರೆ ಬಡವರ ಪಾಡೇನು? ತಮ್ಮ ಮಕ್ಕಳು ಎಲ್ಲರಂತೆ ಓದಲಿ ಅಂತಾ ನೂರಾರು ಆಸೆ ಕನಸು ಕಂಡು ಪೋಷಕರು ಶಾಲೆಗೆ ಸೇರಿಸುತ್ತಾರೆ. ಆದ್ರೆ ಖಾಸಗಿ ಶಾಲೆಯವರು ಯಾವುದನ್ನ ಲೆಕ್ಕಿಸದೇ ಯಾವ ಮೂಲಕ ಹಣ ಮಾಡೋಣ ಅಂತಾ ಬಕಪಾಕ್ಷಿಗಳಂತೆ ಕಾಯ್ತಿರುತ್ತಾರೆ. ಹೀಗೆ ಈಗ ಮಕ್ಕಳ ಪಠ್ಯಪುಸ್ತಕದಲ್ಲಿ ಹಣದ ದಂಧೆ ಎಸೆಗಲು ಖಾಸಗಿ ಶಾಲೆಗಳು ಮುಂದಾಗಿದೆ.ಈ ಖಾಸಗಿ ಶಾಲೆಗಳ ಹಣದ ದುರಾಸೆಗೆ ಕೊನೆಯೇ ಇಲ್ಲದಂತಾಗಿದೆ. ಈಗಾಗಲ್ಲೇ ಶೂ, ಬ್ಯಾಗ್ , ಪುಸ್ತಕ ತೆಗೆದುಕೊಳ್ಳುವಂತೆ ಒತ್ತಡ ಹೇರಬಾರದೆಂದು ಆದೇಶ ಇದೆ. ಆದ್ರು ನಗರದ ಕೆಲವೊಂದು ಖಾಸಗಿ ಶಾಲೆಗಳಾದ ನಾರಾಯಣ ಒಲಂಪಿಯಡ್ ಸ್ಕೂಲ್, ಚೇತನ್ಯ ಸ್ಕೂಲ್, ಸೇರಿದಂತೆ ಬಹುತೇಕ ಶಾಲೆಗಳು ಯಾವುದನ್ನ ಲೆಕ್ಕಿಸದೇ ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ.. ಹೀಗಾಗಿ ಹಣ ಮಾಡುವುದಕ್ಕೆ ಅನ್ಯದಾರಿಯನ್ನ ಕಂಡುಕೊಳ್ಳುತ್ತಿದ್ದಾರೆ. ಈಗ ಖಾಸಗಿ ಶಾಲೆಗಳು ಹೊರಗೆ ಕಡಿಮೆ ಬೆಲೆಗೆ ಪುಸ್ತಕ ತೆಗೆದುಕೊಂಡು ಶಾಲೆಯಲ್ಲಿ  ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಪುಸ್ತಕಗಳಿಗೆ ಶಾಲೆಯ ಬೈಂಡ್ , ಸೀಲ್ ಹಾಕಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಜೊತೆಗೆ ಪೋಷಕರು ಹೊರಗೆ ಪುಸ್ತಕ ತೆಗೆದುಕೊಳ್ಳುವಂತಿಲ್ಲ. ಶಾಲೆಯ ಒಳಗೆ ತೆಗೆದುಕೊಳ್ಳಬೇಕೆಂದು ಕೆಲವೊಂದು ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರುತ್ತಿದೆ.ಶಾಲೆಯಲ್ಲಿಯೇ ಪುಸ್ತಕ ತೆಗೆದುಕೊಳ್ಳುವಂತೆ ಹೇಳುವುದು ಎಷ್ಟು ಸರಿ ಎಂದು ಪೋಷಕರು ಪ್ರಶ್ನೆ ಮಾಡ್ತಿದ್ದಾರೆ. ಅಷ್ಟೇ ಅಲ್ಲದೆ ಖಾಸಗಿ ಶಾಲೆಯ ಹಣದ ಆಮಿಷದ ವಿರುದ್ಧ ಪೋಷಕರು ಕೆಂಡಮಂಡಲರಾಗಿದ್ದು,  ಏನುಮಾಡಲಾಗದ ಸ್ಥಿತಿಗೆ  ತಲುಪಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂಬೈ– ಪುಣೆ ಪ್ರಯಾಣಿಕರ ಜತೆ ಗುಡ್‌ನ್ಯೂಸ್ ಹಂಚಿಕೊಂಡ ನಿತಿನ್ ಗಡ್ಕರಿ

ಉತ್ತರಕಾಶಿ ಮೇಘಸ್ಫೋಟ: ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜಿಗೆ ರಜೆ ಘೋಷಣೆ

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಉತ್ತರಕಾಶಿಯ ರಣಭೀಕರ ಮೇಘಸ್ಫೋಟ: ಮಿಡಿದ ಮೋದಿಯಿಂದ, ರಕ್ಷಣಾ ನೆರವು ಘೋಷಣೆ

ಮುಂದಿನ ಸುದ್ದಿ
Show comments