Webdunia - Bharat's app for daily news and videos

Install App

ಶಿಕ್ಷಣ ಇಲಾಖೆಯ ವಿರುದ್ಧ ಗರಂ ಆದ ಖಾಸಗಿ ಶಾಲೆಗಳು

Webdunia
ಶುಕ್ರವಾರ, 26 ಆಗಸ್ಟ್ 2022 (15:16 IST)
ಖಾಸಗಿ ಶಾಲಾ ಒಕ್ಕೂಟದಿಂದ  ಬಿಇಒ, ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಗಳ ಪರ್ಸಂಟೇಜ್ ಆರೋಪ ವಿಚಾರವಾಗಿ ಖಾಸಗಿ ಶಾಲೆಗಳಿಂದ ಇಂದು ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಟಿಯಲ್ಲಿ ಖಾಸಗಿ ಶಾಲಾ ಒಕ್ಕೂಟದ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ  ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೊಸ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ .ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ .ಹಣ ಮಾಡಲು ಹೊಸ ಹೊಸ ವಿಧಾನಗಳನ್ನು ಶಾಲೆಗಳಲ್ಲಿ ಅಳವಡಿಕೆ ಮಾಡಲಾಗ್ತಿದೆ.ಹೀಗಾಗಿ ಅನಿವಾರ್ಯವಾಗಿ ಪ್ರದಾನಮಂತ್ರಿಗಳಿಗೆ ಪತ್ರ ಬರೆಯಬೇಕಾದ ಅನಿವಾರ್ಯತೆ ಎದುರಾಗಿದೆ.
 
ಪ್ರತಿ ವರ್ಷ ಮಾನ್ಯತೆ ನವೀಕರಣ ಅಂತ ಸಚಿವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ .ಶಾಲೆಗಳಲ್ಲಿ ರಿನಿವಲ್ ಹಣ ಇಲ್ಲದೆ ಮಾನ್ಯತೆ ನವೀಕರಣ ಮಾಡಲ್ಲ ಅಂತಿದ್ದಾರೆ.ಇದಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ಡ್ಯಾಕ್ಯುಮೆಂಟ್ಸ್ ಇದೆ.ಲಂಚ ಪಡೆಬೇಕು ಅಂತ ಹೊಸ ಮಾರ್ಗ ಶುರುಮಾಡಿದ್ದಾರೆ.ಅಗ್ನಿ ಸುರಕ್ಷಿತೆ ಹೆಸರಲ್ಲಿ ಹಣ ಪಿಕುತ್ತಿದ್ದಾರೆ .ಇದರಿಂದ ಬಜೆಟ್ ಶಾಲೆಗಳಿಗೆ ಸಮಸ್ಯೆಯಾಗ್ತಿದೆ.
 
RTE ಮರುವತಿ ಶುಲ್ಕ ವಾಪಸ್ ಪಡೆಯಲು 50% ಕೊಡಬೇಕು.ಹೀಗಾಗಿ ಹಣ ತೆಗೆದುಕೊಳ್ಳುವುದೇ ಬೇಡ ಅಂತ ಡಿಸೈಡ್ ಮಾಡಿದ್ದೇವೆ .ಅಗ್ನಿ ಸುರಕ್ಷೆಯನ್ನು ಅನ್ ಲೈನ್ ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದ್ದೇವೆ .ಆದ್ರೆ ಈವರೆಗೆ ಯಾವುದೇ ಕ್ರಮ ಆಗಿಲ್ಲ .NOC ಪಡೆಯಲು ಪ್ರತಿ ಟೇಬಲ್ ಮೂವ್ ಆಗುತ್ತೆ BEO ಆಫೀಸ್ TO ಮಿನಿಸ್ಟರ್ ವರೆಗೆ ಹಣ ಕೊಡಬೇಕು .ಪ್ರತಿ ಟೇಬಲ್ ಗೂ ಹಣ ಕೊಡಬೇಕು ಎಂದು ಸರ್ಕಾರವನ್ನ ಲೋಕೇಶ್ ತಾಳಿಕಟ್ಟೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
 
 ಖಾಸಗಿ ಶಾಲೆಗಳಿಂದ ಹಣ ವಸೂಲಿಗೆ ಸೃಷ್ಟಿ ಮಾಡಿರೋ ಸಮಸ್ಯೆಗಳ ಪಟ್ಟಿ ಇಂತಿದೆ 
 
1 . RR( ಮಾನ್ಯತೆ ನವೀಕರಣ ) ನೀಡಲು ಲಕ್ಷಾಂತರ ಹಣ ಇಲಾಖೆಯ ಅಧಿಕಾರಿಗಳಿಗೆ ಕೊಡಬೇಕು 
 
2. ಲಂಚ ಪಡೆಯಲು ಹೊಸ ಮಾರ್ಗ  ಅನ್ವೇಷಣೆ ( ಅಗ್ನಿ ಸುರಕ್ಷತಾ ಪ್ರಮಾಣ ಪತ್ರಕ್ಕೆ )
 
3. RTE ಶುಲ್ಕ ಮರುಪಾವತಿ ಪಡೆಯಲು 30 ರಿಂದ 40 % ಲಂಚ ವಸೂಲಿ 
 
4. ಅನ್ಯ ಪಠ್ಯಕ್ರಮ ಅನುಸರಿಸಲು NOC ಗಾಗಿ ಬಾರಿ ಭ್ರಷ್ಟಾಚಾರ 
 
5. ದಾಖಲೆಗಳ ನೆಪದಲ್ಲಿ ತಿಂಗಳಿಗೊಮ್ಮೆ ಮಾಮೂಲಿ ವಸೂಲಿ 
 
6 . ವರ್ಷಕ್ಕೊಮ್ಮೆ ವರ್ಗಾವಣೆಯ ದಂಧೆ
 
7. ಸರ್ಕಾರಿ ಶಾಲೆಗಳನ್ನು ಮರೆತಿರುವ ಶಿಕ್ಷಣ ಮಂತ್ರಿಗಳು
 
8 . ಧಾರ್ಮಿಕ ಸೂಕ್ಷ್ಮ ವಿಚಾರಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಕಲುಷಿತಗೊಳಿಸುತ್ತಿರುವುದು
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sukma Naxals Surrendered: 22 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣು

ಮೂರು ವರ್ಷ ನಮ್ಮದು ಹೋರಾಟ ಪರ್ವ: ಬಿವೈ ವಿಜಯೇಂದ್ರ

JEE Main Result 2025: JEE Main ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ ಇಲ್ಲಿ ನೋಡಿ

ಅನುಭವ ಮಂಟಪ ಮುಗಿಸಲು ನಿಮ್ಮ ಡಿ.ಕೆ.ಶಿವಕುಮಾರ್ ಬಿಡುತ್ತಾರಾ: ಬಿ.ವೈ.ವಿಜಯೇಂದ್ರ

CET exam: ಬ್ರಾಹ್ಮಣರ ಜನಿವಾರ ತೆಗೆಸಿದ್ದು ನಿಜ ಆದ್ರೆ ಕ್ರಮ ಕೈಗೊಳ್ತೀವಿ: ಸಚಿವ ಡಾ ಎಂಸಿ ಸುಧಾಕರ್

ಮುಂದಿನ ಸುದ್ದಿ
Show comments