Webdunia - Bharat's app for daily news and videos

Install App

'ಪ್ರಧಾನಿ ಮೋದಿ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ'

Webdunia
ಗುರುವಾರ, 29 ಜುಲೈ 2021 (14:59 IST)
ಬೆಂಗಳೂರು (ಜು.29):  70 ವರ್ಷದಲ್ಲಿ ಕಾಂಗ್ರೆಸ್, ಹಾಗು ಇತರ ಸರ್ಕಾರಗಳು ಒಟ್ಟು ಮಾಡಿದ ಸಾಲ 52 ಲಕ್ಷ ಕೋಟಿ. ನರೇಂದ್ರ ಮೋದಿ ಅವರು ಕೇವಲ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು  ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದರು.

•70 ವರ್ಷದಲ್ಲಿ ಕಾಂಗ್ರೆಸ್, ಹಾಗು ಇತರ ಸರ್ಕಾರಗಳು ಒಟ್ಟು ಮಾಡಿದ ಸಾಲ 52 ಲಕ್ಷ ಕೋಟಿ
•ನರೇಂದ್ರ ಮೋದಿ ಅವರು ಕೇವಲ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ
•ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ  ವಾಗ್ದಾಳಿ
ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ಅವರು ಕೇವಲ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲಿನ ಮಾಡಿದ್ದಾರೆ.  ಇದನ್ನ ಅಚ್ಛೇ ದಿನ್ ಅಂತ ನೀವು ಕರೆಯುವ ಹಾಗಿದ್ರೆ ಕರೆದುಕೊಳ್ಳಿ. ನನ್ನದೇನು ಅಭ್ಯಂತರವಿಲ್ಲ. ಮೋದಿ ಸರ್ಕಾರದ 6 ವರ್ಷದಲ್ಲಿ 23 ಕೋಟಿ ಭಾರತೀಯರು ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ ಎಂದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ 30 ಕೋಟಿ ಜನ ಬಡತನ ರೇಖೆಯ ಮೇಲಿದ್ದರು. ಈಗ ಮೋದಿ ಸರ್ಕಾರದಲ್ಲಿ ಅಭಿವೃದ್ಧಿ ದರ ಮೈನಸ್ ಆಗಿದೆ ಎಂದರು.
 ಸಿಎಂ ಬಗ್ಗೆ ಪ್ರಸ್ತಾಪ : ಬಸವರಾಜ್ ಬೊಮ್ಮಾಯಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲು ಹೋಗಿದ್ದಾರೆ. ಇದು ಸಂತೋಷದ ವಿಚಾರ. ಬೊಮ್ಮಾಯಿ ನನ್ನ ನಡುವೆ ಉತ್ತಮ ಸಂಬಂಧವಿತ್ತು. ನಿಮಗೆ ಯಾವುದೇ ಅನುಮಾನ ಬೇಡ. ಆದರೆ ಅದು ಇವರಲ್ಲ.  ಇವರ ತಂದೆ ಎಸ್ ಆರ್ ಬೊಮ್ಮಾಯಿ ಜೊತೆಗೆ.
ಎಸ್.ಆರ್ ಬೊಮ್ಮಾಯಿ ಅವರ ಮಗ ಬಸವರಾಜ್ ಬೊಮ್ಮಾಯಿ ಎಂದು ನಾನೆಂದೂ ಸಾಫ್ಟ್ ಕಾರ್ನರ್ ತೋರಿಸಲ್ಲ. ವ್ಯಕ್ತಿಗತ ಪ್ರೀತಿ ವಿಶ್ವಾಸ ಬೇರೆ.  ಅದು ಮನುಷ್ಯ ಸಹಜ ಗುಣ. ಆದರೆ ರಾಜಕೀಯ ಸಿದ್ಧಾಂತ ಮುಖ್ಯ. ನಮ್ಮ ಸಿದ್ಧಾಂತ ಬೇರೆ, ಬೊಮ್ಮಾಯಿ ಸಿದ್ಧಾಂತ ಬೇರೆ. ನಾವು ರಾಜಕಾರಣದ ಕಣ್ಣಿಂದ ನೋಡುವುದು. ಬಸವರಾಜ್ ಬೊಮ್ಮಾಯಿ ಈಗ ಜನತಾದಳದಲ್ಲಿ  ಇಲ್ಲವಲ್ಲ.  ಬಸವರಾಜ್ ಬೊಮ್ಮಾಯಿ ಕೋಮುವಾದಿ ಬಿಜೆಪಿ ಪಾರ್ಟಿ ಸೇರಿಕೊಂಡ ಮೇಲೆ ಸಂಬಂಧ ಕಟ್ ಆದಂತೆ. ನಮ್ಮ ಅವರ ಐಡಿಯಾಲಜಿ ಬೇರೆ ಬೇರೆ ಆಗುತ್ತದೆ. ಬಸವರಾಜ್ ಬೊಮ್ಮಯಿ ಅಪ್ಪನಿಗಿಂತ ಬುದ್ಧಿವಂತ ಆಗಬಹುದು. ದಡ್ಡರು ಸಹ ಆಗಬಹುದು. ಮಹಾತ್ಮ ಗಾಂಧಿಯವರನ್ನ ನಾವು ಮಹಾತ್ಮ ಎಂದು ಕರೆಯುತ್ತೇವೆ. ಅವರ ಮಗ ಕೆಟ್ಟ ಅಭ್ಯಾಸಗಳನ್ನ ಕಲಿತಿದ್ರು. ಬುದ್ದಿವಂತರ ಮಕ್ಕಳು ಜಾಣರು ಆಗಬಹುದು. ದಡ್ಡರು ಆಗಬಹುದು ಎಂದು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟರು.
ಇನ್ನು ರಾಜ್ಯದಲ್ಲಿ ಆದಷ್ಟು ಬೇಗ ಸಂಪುಟ ರಚನೆ ಆಗಬೇಕು. ಒಂದು ವಾರದ ಒಳಗೆ ಆಗಬೇಕು. ಕೊರೋನ ಇದೆ,ನೆರೆ ಇದೆ.ಸಿಎಂ ಒಬ್ಬರೇ ಎಲ್ಲವನ್ನೂ ನೋಡಲು ಆಗುವುದಿಲ್ಲ ಈ ನಿಟ್ಟಿನಲ್ಲಿ ಸಚಿವರ ಅಗತ್ಯವಿದೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾರಿ ಶಕ್ತಿಯ ಚಿಹ್ನೆ ಸಿಂಧೂರ್‌: ಅಹಲ್ಯಾಬಾಯಿ ಹೋಳ್ಕರ್‌ಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

London viral video: ಈಕೆ ಕೈಯಲ್ಲಿ ಊಟ ಮಾಡಿದ್ದೇ ತಪ್ಪಾಯ್ತು, ಏನಾಗಿದೆ ವಿಡಿಯೋ ನೋಡಿ

ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ತೆರಿಗೆ ಹಣ ಬಳಕೆ: BY ವಿಜಯೇಂದ್ರ ಟೀಕೆ

Karkala: ಸಜೀವ ದಹನವಾದ ಕಂಬಳದ ಚಾಂಪಿಯನ್ ಕೋಣಗಳಿಗೆ ಒಡೆಯನ ಕಣ್ಣೀರ ವಿದಾಯ video

World No Tobbacco Day: ಆರೋಗ್ಯ ದೃಷ್ಟಿಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಸರ್ಕಾರ

ಮುಂದಿನ ಸುದ್ದಿ
Show comments