Webdunia - Bharat's app for daily news and videos

Install App

ಸತ್ತವರ ಹೆಸರಲ್ಲೂ ಪ್ರಧಾನ ಮಂತ್ರಿ ಅವಾಸ್ ಯೋಜನೆ ಹಣ ಗುಳುಂ

Webdunia
ಮಂಗಳವಾರ, 30 ಅಕ್ಟೋಬರ್ 2018 (18:29 IST)
ಸತ್ತವರ ಹೆಸರಲ್ಲೂ ಪ್ರಧಾನ ಮಂತ್ರಿ ಅವಾಸ್ ಯೋಜನೆ ಹಣ ಗುಳುಂ ಮಾಡಿರುವ ಆರೋಪ ಕೇಳಿಬಂದಿದೆ.

ಗದಗ ಸಮೀಪದ ನಾಗಾವಿ ತಾಂಡಾದಲ್ಲಿ ಪಿಡಿಒ ಬಚ್ಚೆನಹಳ್ಳಿ ಮತ್ತು ಗ್ರಾಪಂ ಅಧ್ಯಕ್ಷ ಸುರೇಶ ಚವ್ಹಾಣ ಸೇರಿ ಸಾರ್ವಜನಿಕರ ಹಣ ಗುಳುಂ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಸತ್ತವರ ಹೆಸರಲ್ಲೂ ಬಿಲ್ ಪಾಸ್ ಮಾಡ್ಕೊಂಡು ಹಣ ಲಪಟಾಯಿಸಿರುವ ಅಂಶ ಬೆಳಕಿಗೆ ಬಂದಿದೆ.

ಸುಮಾರು 15 ಕ್ಕೂ ಹೆಚ್ಚು ಜನರ ಹೆಸರಲ್ಲಿ ನಕಲಿ ಜಿಪಿಎಸ್ ಮಾಡಿಸಿ ಜೇಬಿಗೆ ಹಣ ಇಳಿಸಿದ್ದಾರೆಂಬ ಆರೋಪವನ್ನು ಸ್ವತಃ ಹಣ ಕಳೆದುಕೊಂಡವರೇ ಮಾಡಿದ್ದಾರೆ. ಜತೆಗೆ ಮಾಜಿ ಗ್ರಾಪಂ ಅಧ್ಯಕ್ಷ ಸಾರಾಬಾಯಿ ಚವ್ವಾಣ ಕೂಡ ಈ ಗೋಲ್ ಮಾಲ್ ನಲ್ಲಿ ಕೈ ಜೋಡಿಸಿದ್ದಾರೆಂಬ ಸಂಗತಿ ದಾಖಲಾತಿ ಮೂಲಕ ಬಹಿರಂಗಗೊಂಡಿದೆ. ಗ್ರಾಮದ ಪಾಂಡಪ್ಪ ಪೂಜಾರ ಎಂಬುವರು ನಿಧನ ಹೊಂದಿ 8 ವರ್ಷಗಳೇ ಗತಿಸಿವೆ. ಆದ್ರೆ ಅವರ ಹೆಸರಲ್ಲಿ ಪಿಎಂ ಅವಾಸ್ ಯೋಜನೆಯಲ್ಲಿ ಮನೆ ಮಂಜೂರು ಮಾಡಿ 37292 ರೂ. ಡ್ರಾ ಮಾಡಿಕೊಂಡಿದ್ದು ದಾಖಲಾತಿ ಮೂಲಕ ಬಹಿರಂಗಗೊಂಡಿದೆ. ಇನ್ನೂ ಕೇಲವ್ವ ಎಂಬ ಮಹಿಳೆ ಹೆಸರಲ್ಲಿ ಗ್ರಾಪಂ ಅಧ್ಯಕ್ಷ ಸುರೇಶ ಚವ್ವಾಣ 1,50,000 ರೂ. ಪಡೆದಿದ್ದಾನೆ ಎಂಬುದು ಗೊತ್ತಾಗಿದೆ.

ಕೇಲವ್ವ ಹೆಸರಲ್ಲಿ ಹಣ ಮಂಜೂರಾಗಿದ್ದು ಮನೆಯ ಜಿಪಿಎಸ್ ಮಾಡುವಾಗ ಅಧ್ಯಕ್ಷ ಸುರೇಶ ಮನೆ ಎದುರು ಫೋಟೋ ತೆಗೆಸಿಕೊಂಡು ಜಿಪಿಎಸ್ ಮಾಡಿಸಿಕೊಂಡಿದ್ದೆ ಸುರೇಶ ಸಿಕ್ಕಿ ಹಾಕಿಕೊಳ್ಳೋದಕ್ಕೆ ಮುಖ್ಯ ಕಾರಣವಾಗಿದೆ. ಗ್ರಾಮದ ಪೀರಪ್ಪ ಪವಾರ್, ರಮೇಶ ತೋಟದ, ಶಿವಪ್ಪ ರಾಠೋಡ, ಸೋಮಪ್ಪ ಲಮಾನಿ ನಿಂಗಪ್ಪ ಹಂದರಾಳ ಸೇರಿದಂತೆ 15ಕ್ಕೂ ಹೆಚ್ಚು ಜನರ ಹೆಸರಲ್ಲಿ ಮನೆ ಮಂಜೂರು ಮಾಡಿಕೊಂಡು ಲಕ್ಷಾಂತರ ಹಣ ಲಪಟಾಯಿಸಿದ್ದು ಬೆಳಕಿಗೆ ಬಂದಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments