Select Your Language

Notifications

webdunia
webdunia
webdunia
webdunia

ಮೊಮ್ಮಗ ಪ್ರಜ್ವಲ್`ಗೆ ದೇವೇಗೌಡರು ಹೇಳಿದ ಬುದ್ಧಿಮಾತು

ಮೊಮ್ಮಗ ಪ್ರಜ್ವಲ್`ಗೆ ದೇವೇಗೌಡರು ಹೇಳಿದ ಬುದ್ಧಿಮಾತು
ಬೆಂಗಳೂರು , ಭಾನುವಾರ, 9 ಜುಲೈ 2017 (15:30 IST)
ಪ್ರಜ್ವಲ್ ರೇವಣ್ಣರನ್ನ ಕರೆಯಿಸಿ ಬುದ್ಧಿ ಹೇಳಿದ್ದೇನೆ. ಪ್ರಜ್ವಲ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಜೆಡಿಎಸ್`ನಲ್ಲಿ ಬ್ರೀಫ್ ಕೇಸ್ ಸಂಸ್ಕೃತಿ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಇತ್ತೀಚೆಗೆ ಹುಣಸೂರು ಕಾರ್ಯಕ್ರಮದ ವೇಳೆ ಜೆಡಿಎಸ್`ನಲ್ಲಿ ಸೂಟ್ ಕೇಸ್ ತಂದವರಿಗೆ ಮುಂದಿನ ಬೆಂಚ್, ಪಕ್ಷಕ್ಕಾಗಿ ದುಡಿದವರಿಗೆ ಹಿಂದಿನ ಬೆಂಚ್ ಹಾಕುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಬಹಿರಂಗ ಹೇಳಿಕೆ ನೀಡಿದ್ದರು. ಪ್ರಜ್ವಲ್ ಹೇಳಿಕೆ ಬಗ್ಗೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ಣಿಡಿರುವ ಮಾಜಿ ಪ್ರಧಾನಿ ದೇವೇಗೌಡರು, ನಮ್ಮಲ್ಲಿ ಬ್ರೀಫ್ ಕೇಸ್ ಸಂಸ್ಕೃತಿ ಇಲ್ಲ, ಪ್ರಜ್ವಲ್ ತಮ್ಮ ಹೇಳಿಕೆಗೆ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯಮಟ್ಟದಲ್ಲಿ ನೀನು ಹೆಸರು ಕಳೆದುಕೊಂಡಿದ್ದೀಯ. ನಿನ್ನ ಹೆಸರಿಗೆ ಡ್ಯಾಮೇಜ್ ಆಗಿದೆ ಎಂದು ಪ್ರಜ್ವಲ್ ರೇವಣ್ಣಗೆ ಬುದ್ಧಿ ಹೇಳಿದ್ದೇನೆ. ಪ್ರಜ್ವಲ್ ಹೇಳಿಕೆಯಿಂದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೂ ನೋವಾಗಿದೆ. ಕುಮಾರಸ್ವಾಮಿ ಬಳಿಯೂ ಕ್ಷಮೆಯಾಚಿಸುವುದಾಗಿ ಪ್ರಜ್ವಲ್ ಹೇಳಿದ್ದಾರೆ. ರಾಜಕೀಯ ಮಕ್ಕಳಾಟವಲ್ಲ, ಅದು ಮುಳ್ಳಿನ ಹಾದಿ ಎಂದು ತಿಳಿ ಹೇಳಿರುವುದಾಗಿ ದೇವೇಗೌಡರು ತಿಳಿಸಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಅತಿ ಕಿರಿಯ ವಯಸ್ಸಿನ ಬೋಯಿಂಗ್ 777 ಕಮಾಂಡರ್ ಆದ ಆ್ಯನಿ