Select Your Language

Notifications

webdunia
webdunia
webdunia
webdunia

ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ: ಅನಂತ್‌ಕುಮಾರ್ ಹೆಗ್ಡೆ

ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ: ಅನಂತ್‌ಕುಮಾರ್ ಹೆಗ್ಡೆ
ಮಂಗಳೂರು , ಶನಿವಾರ, 9 ಸೆಪ್ಟಂಬರ್ 2017 (13:04 IST)
ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.
ನಯಾಪೈಸೆ ಖರ್ಚು ಮಾಡದೇ ಐದು ಬಾರಿ ಸಂಸದನಾಗಿದ್ದೇನೆ. ನಾನು ಯಾವತ್ತೂ ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ಜನರೊಂದಿಗೆ ನಿರಂತರ ಸಂಪರ್ಕವಿರುವುದೇ ನನ್ನ ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
 
ಜನರಿಗಾಗಿ ಮಾಡಿದ ಹೋರಾಟಗಳಿಂದಾಗಿ ನನ್ನ ಮೇಲೆ ಕೆಲವು ಆರೋಪಗಳಿವೆ. ಆದರೆ, ಜಾತಿಗಾಗಿ ಮತ್ತು ಹಣಕ್ಕಾಗಿ ಯಾವತ್ತೂ ಆಸೆಪಟ್ಟವನಲ್ಲ ಎಂದರು.
 
ಕೌಶಲ್ಯವಿರುವವರನ್ನು ಗುರುತಿಸಿ ತರಬೇತಿ ನೀಡುತ್ತೇವೆ. ರಾಜ್ಯದ ಜನತೆ ಕೇಂದ್ರ ಸರಕಾರದಿಂದ ಹೆಚ್ಚಿನ ಲಾಭ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.
 
ಮುಂಬರುವ 2018 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವಿದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಭವಿಷ್ಯ ನುಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

17 ಮಂದಿ ಹಿರಿಯ ಸಾಹಿತಿಗಳಿಗೆ ಜೀವ ಬೆದರಿಕೆ: ಸಿಎಂ ಸಿದ್ದರಾಮಯ್ಯ