Select Your Language

Notifications

webdunia
webdunia
webdunia
webdunia

ತಮಿಳುನಾಡು ರೈತರ ಪ್ರತಿಭಟನೆ ಹಿಂದೆ ರಾಜಕಾರಣಿಗಳ ಕೈವಾಡ: ದೇವೇಗೌಡ

ತಮಿಳುನಾಡು ರೈತರ ಪ್ರತಿಭಟನೆ ಹಿಂದೆ ರಾಜಕಾರಣಿಗಳ ಕೈವಾಡ: ದೇವೇಗೌಡ
ಬೆಂಗಳೂರು , ಶನಿವಾರ, 1 ಏಪ್ರಿಲ್ 2017 (19:16 IST)
ದೆಹಲಿಯಲ್ಲಿ ತಮಿಳುನಾಡು ರೈತರ ಪ್ರತಿಭಟನೆ ಹಿಂದೆ ರಾಜಕೀಯ ನಾಯಕರ ಕೈವಾಡವಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪಿಸಿದ್ದಾರೆ. ದೆಹಲಿಯಲ್ಲಿ ತಮಿಳುನಾಡು ರೈತರು ಪ್ರತಿಭಟನೆ ನಡೆಸುತ್ತಾರೆ. ಅಧಿಕಾರಿಗಳು ಇಲ್ಲಿ ಬಂದು ನೀರು ಕೇಳುತ್ತಾರೆ. ತಮಿಳ್ನಾಡು ರೈತರು ಕಷ್ಟದಲ್ಲಿರುಇವ ರೀತಿ ಬಿಂಬಿಸಲಾಗುತ್ತಿದೆ ಎಂದು ದೇವೇಗೌಡರು ಆರೋಪಿಸಿದ್ದಾರೆ.

ತಮಿಳುನಾಡಿಗೆ ಬಿಡಲು ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯದ ರೈತರ ಗೋಳು ಯಾರಿಗೂ ಅರ್ಥವಾಗುತ್ತಿಲ್ಲ. ರೈತೆರ ಸ್ಥಿತಿಗತಿ ಅರಿಯಲು ನಾಳೆ ಮೈಸೂರಿಗೆ ತೆರಳುತ್ತಿರುವುದಾಗಿ ದೇವೇಗೌಡ ಹೇಳಿದ್ದಾರೆ.

ಇದೇವೇಳೆ, ದೆಹಲಿಯಲ್ಲಿ ತಮಿಳುನಾಡು ರೈತರನ್ನ ಭೇಟಿಯಾದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ದೇವೇಗೌಡರು, ರಾಹುಲ್ ಗಾಂಧಿಗೆ ರಾಜ್ಯದ ರೈತರ ಗೋಳು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿಗೆ ಹೋಗಿ ಬಂದ ಬಿಎಸ್‌ವೈ ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಜಿ. ಪರಮೇಶ್ವರ್ ಲೇವಡಿ