Publish Date: Sat, 12 May 2018 (07:28 IST)
Updated Date: Sat, 12 May 2018 (07:34 IST)
ಬೆಂಗಳೂರು: ಚುನಾವಣಾ ದಿನ ಎಂದರೆ ರಾಜಕೀಯ ನಾಯಕರಿಗೆ ಅಗ್ನಿ ಪರೀಕ್ಷೆಯಿದ್ದಂತೆ. ಹೀಗಾಗಿ ಪಕ್ಷ ಬೇಧ ಮರೆತು ದೇವರ ಮೊರೆ ಹೋಗುವುದು ಸಹಜ.
ಇಂದು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ರಾಜಕೀಯ ನಾಯಕರು ಮತದಾನಕ್ಕೆ ಮೊದಲು ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಶಾಸಕ ಬೈರತಿ ಬಸವರಾಜು ಬೆಳ್ಳಂ ಬೆಳಿಗ್ಗೆಯೇ ಪತ್ನಿ ಸಮೇತರಾಗಿ ಗೋ ಪೂಜೆ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಶಾಸಕ ಗೋಪಾಲಯ್ಯ ಕೂಡಾ ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕವಷ್ಟೇ ಈ ನಾಯಕರು ಮತಗಟ್ಟೆಗೆ ತೆರಳಲಿದ್ದಾರೆ.