Webdunia - Bharat's app for daily news and videos

Install App

ಬಾಲಬಿಚ್ಚಿದರೆ ಹುಷಾರ್: ಪುಡಿರೌಡಿಗಳಿಗೆ ಎಸ್ಪಿ ಎಚ್ಚರಿಕೆ

Webdunia
ಬುಧವಾರ, 4 ಏಪ್ರಿಲ್ 2018 (15:30 IST)
ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ರೌಡಿಗಳ ಪರೇಡ್ ನಡೆಸಿದರು.  
ಕೈಯಲ್ಲಿ ದಾರ, ಕೊರಳಲ್ಲಿ  ದೊಡ್ಡ ದೊಡ್ಡ ಚೈನ್ ಹಾಕಿದ ರೌಡಿಗಳಿಗ ಲಾಠಿ ರುಚಿ ತೋರಿಸಿದ ಎಸ್ಪಿ, ಚೈನ್, ದಾರಗಳನ್ನು ತೆಗೆದು ಹಾಕಿದರು. ಇನ್ನು ರೌಡಿಗಳೆಂದು ತೋರಿಸಿಕೊಳ್ಳಲು ತಲೆ ಮೇಲೆ ವಿಚಿತ್ರವಾಗಿ ಉದ್ದುದ್ದಾಗಿ ಕೂದಲು  ಬಿಟ್ಟಿದ್ದ ರೌಡಿಗಳ ಹೇರ್ ಸ್ಟೈಲ್ ಚೆಂಜ್ ಮಾಡಿಸಿದರು.  ಪೊಲೀಸ್ ಪರೇಡ್ ಮೈದಾನಕ್ಕೇ ಕ್ಷೌರಿಕರನ್ನು ಕರೆಸಿ, ರೌಡಿಗಳ ಹೇರ್ ಸ್ಟೈಲ್ ಗೆ ಕತ್ತರಿ ಹಾಕಿಸಿದರು.
 
ಬಾಲ ಬಿಚ್ಚಿದರೆ ಹುಷಾರ್...!: 
 
ಬಿಸಿಲುನಾಡು ಖ್ಯಾತಿಯ ಕಲಬುರಗಿ ಜಿಲ್ಲಾದ್ಯಂತ 3800 ರೌಡಿಗಳಿದ್ದಾರೆ. ಮಹಾನಗರದಲ್ಲಿ 800ಕ್ಕಿಂತ ಹೆಚ್ಚು ಜನರಿದ್ದಾರೆ. ಅವರಲ್ಲಿ 300 ಜನ ರೌಡಿಗಳ ಪರೇಡ್ ನಡೆಸಿದ ಎಸ್ಪಿ, ಟ್ಯಾಟೂ ಹಾಕಿಕೊಂಡ ಮತ್ತು ಉದ್ದುದ್ದ ಕೂದಲು ಬಿಟ್ಟ ರೌಡಿಗಳಿಗೆ ಲಾಠಿ ರುಚಿ ತೋರಿಸಿದರು. 
 
ಟ್ಯಾಟೂ ಹಾಕಿಸಿಕೊಂಡವರಿಗೆ ಗದರಿಸಿ; ಕೈಯಲ್ಲಿ ಹಾಕಿಕೊಂಡ ದಾರ, ಚೈನ್ ಗಳನ್ನು ಕಸಿದುಕೊಂಡರು. ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆಗೆ ಮುಂದಾಗಿ ಬಾಲ ಬಿಚ್ಚಿದರೆ ಹುಷಾರ್ ಎಂದು ಖಡಕ್ ಎಚ್ಚರಿಕೆಯನ್ನು ಎಸ್ ಪಿ ಎನ್.ಶಶಿಕುಮಾರ್ ನೀಡಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

ಮೊದಲು ಕೇಂದ್ರದಲ್ಲಿ ಅಧಿಕಾರ ಬನ್ನಿ, ಆಮೇಲೆ ಆರ್ ಎಸ್ಎಸ್ ಮಾಡುವಿರಂತೆ: ಪ್ರಿಯಾಂಕ್ ಖರ್ಗೆ ಟ್ರೋಲ್

ಡಾ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದೇ ಕಾರಣಗಳು: ಇದನ್ನು ಪಾಲಿಸಿದ್ರೆ ಸಾಕು

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಜೀವ ಕಾಪಾಡಿದ ಡ್ಯೂಟಿ ಡಾಕ್ಟರ್

ಮುಂದಿನ ಸುದ್ದಿ
Show comments