ಬಾಲಬಿಚ್ಚಿದರೆ ಹುಷಾರ್: ಪುಡಿರೌಡಿಗಳಿಗೆ ಎಸ್ಪಿ ಎಚ್ಚರಿಕೆ

Webdunia
ಬುಧವಾರ, 4 ಏಪ್ರಿಲ್ 2018 (15:30 IST)
ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ರೌಡಿಗಳ ಪರೇಡ್ ನಡೆಸಿದರು.  
ಕೈಯಲ್ಲಿ ದಾರ, ಕೊರಳಲ್ಲಿ  ದೊಡ್ಡ ದೊಡ್ಡ ಚೈನ್ ಹಾಕಿದ ರೌಡಿಗಳಿಗ ಲಾಠಿ ರುಚಿ ತೋರಿಸಿದ ಎಸ್ಪಿ, ಚೈನ್, ದಾರಗಳನ್ನು ತೆಗೆದು ಹಾಕಿದರು. ಇನ್ನು ರೌಡಿಗಳೆಂದು ತೋರಿಸಿಕೊಳ್ಳಲು ತಲೆ ಮೇಲೆ ವಿಚಿತ್ರವಾಗಿ ಉದ್ದುದ್ದಾಗಿ ಕೂದಲು  ಬಿಟ್ಟಿದ್ದ ರೌಡಿಗಳ ಹೇರ್ ಸ್ಟೈಲ್ ಚೆಂಜ್ ಮಾಡಿಸಿದರು.  ಪೊಲೀಸ್ ಪರೇಡ್ ಮೈದಾನಕ್ಕೇ ಕ್ಷೌರಿಕರನ್ನು ಕರೆಸಿ, ರೌಡಿಗಳ ಹೇರ್ ಸ್ಟೈಲ್ ಗೆ ಕತ್ತರಿ ಹಾಕಿಸಿದರು.
 
ಬಾಲ ಬಿಚ್ಚಿದರೆ ಹುಷಾರ್...!: 
 
ಬಿಸಿಲುನಾಡು ಖ್ಯಾತಿಯ ಕಲಬುರಗಿ ಜಿಲ್ಲಾದ್ಯಂತ 3800 ರೌಡಿಗಳಿದ್ದಾರೆ. ಮಹಾನಗರದಲ್ಲಿ 800ಕ್ಕಿಂತ ಹೆಚ್ಚು ಜನರಿದ್ದಾರೆ. ಅವರಲ್ಲಿ 300 ಜನ ರೌಡಿಗಳ ಪರೇಡ್ ನಡೆಸಿದ ಎಸ್ಪಿ, ಟ್ಯಾಟೂ ಹಾಕಿಕೊಂಡ ಮತ್ತು ಉದ್ದುದ್ದ ಕೂದಲು ಬಿಟ್ಟ ರೌಡಿಗಳಿಗೆ ಲಾಠಿ ರುಚಿ ತೋರಿಸಿದರು. 
 
ಟ್ಯಾಟೂ ಹಾಕಿಸಿಕೊಂಡವರಿಗೆ ಗದರಿಸಿ; ಕೈಯಲ್ಲಿ ಹಾಕಿಕೊಂಡ ದಾರ, ಚೈನ್ ಗಳನ್ನು ಕಸಿದುಕೊಂಡರು. ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆಗೆ ಮುಂದಾಗಿ ಬಾಲ ಬಿಚ್ಚಿದರೆ ಹುಷಾರ್ ಎಂದು ಖಡಕ್ ಎಚ್ಚರಿಕೆಯನ್ನು ಎಸ್ ಪಿ ಎನ್.ಶಶಿಕುಮಾರ್ ನೀಡಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹುಬ್ಬಳ್ಳಿ ಜಿಮ್‌ ಟ್ರೈನರ್‌ ವಿರುದ್ಧ ಅತ್ಯಾಚಾರ ಆರೋಪ: ಸೂಕ್ತ ಕ್ರಮಕ್ಕೆ ಪರಮೇಶ್ವರ್ ಸೂಚನೆ

ತಮಿಳುನಾಡು ವಿಧಾನಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿ ಪಟ್ಟಿಯಲಿಲ್ಲ ಅಣ್ಣಾಮಲೈ ಹೆಸರಿಲ್ಲ, ಭಾರೀ ಕುತೂಹಲ

ಯೋಗಿ ಆದಿತ್ಯನಾಥ್‌ರನ್ನು ಭೇಟಿಯಾದ ಗೌತಮ್ ಅದಾನಿ

ವೇದಿಕೆಯಲ್ಲೇ ಕುಸಿದು ಬಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ದೆ, Video

ಮುಸ್ಲಿಂ ಮತ ಬೇಡ ಎನ್ನುವ ಬಸನಗೌಡ ಪಾಟೀಲ ಯತ್ನಾಳ್ ಹುಚ್ಚ

ಮುಂದಿನ ಸುದ್ದಿ
Show comments