Select Your Language

Notifications

webdunia
webdunia
webdunia
webdunia

ಪೊಲೀಸ್ ಪ್ರತಿಭಟನೆ ಹತ್ತಿಕ್ಕಲು ಸರಕಾರದಿಂದ ಎಸ್ಮಾ ಕಾಯ್ದೆ ಜಾರಿ

ಪೊಲೀಸ್ ಪ್ರತಿಭಟನೆ
ಬೆಂಗಳೂರು , ಬುಧವಾರ, 1 ಜೂನ್ 2016 (11:21 IST)
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಜೂನ್ 4 ರಂದು ರಾಜ್ಯಾದ್ಯಂತ ಪೊಲೀಸರು ಕೈಗೊಂಡಿರುವ ಪ್ರತಿಭಟನೆ ಹತ್ತಿಕ್ಕಲು ರಾಜ್ಯ ಸರಕಾರ ಎಸ್ಮಾ ಅಸ್ತ್ರವನ್ನು ಬಳಸಿದೆ.
 
ಹಿರಿಯ ಅಧಿಕಾರಿಗಳ ಸಭೆಯ ನಿರ್ಧಾರದಂತೆ ಜೂನ್ 4 ರಂದು ಪ್ರತಿಭಟನೆ ನಡೆಸಲು ಸಾಮೂಹಿಕ ರಜೆ ಹಾಕುವ ಪೊಲೀಸರ ವಿರುದ್ಧ ಎಸ್ಮಾ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
 
ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಸಾರ್ವಜನಿಕರ ಆಸ್ತಿ, ಮಾನ, ಪ್ರಾಣ ಕಾಪಾಡುವಂತಹ ಮಹತ್ವದ ಜವಾಬ್ದಾರಿ ಇರುವಂತಹ ಇಲಾಖೆ. ಇಂತಹ ಇಳಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ನಿರಾಕರಿಸಿದ್ದಲ್ಲಿ, ಸಾಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುಗುವ ಸಾಧ್ಯತೆಗಳಿವೆ ಎಂದು ಸರಕಾರ ಅಭಿಪ್ರಾಯ ಪಟ್ಟಿದೆ. ರಾಜ್ಯದ ಹಿತದೃಷ್ಟಿಯಿಂದ ರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013 (ಎಸ್ಮಾ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಮೇನಿಯಾ; ತೀರ್ಪು ಬದಲಿಸಲಿಲ್ಲವೆಂದು ಅಂಪೈರ್ ಸಹೋದರಿ ಹತ್ಯೆ