Select Your Language

Notifications

webdunia
webdunia
webdunia
webdunia

ಸಂತ್ರಸ್ತರಿರುವ ಬಾಲಮಂದಿರ ಸುತ್ತ ಪೊಲೀಸ್​ ಬಂದೋಬಸ್ತ್

ಸಂತ್ರಸ್ತರಿರುವ ಬಾಲಮಂದಿರ ಸುತ್ತ ಪೊಲೀಸ್​ ಬಂದೋಬಸ್ತ್
chitradurga , ಮಂಗಳವಾರ, 30 ಆಗಸ್ಟ್ 2022 (17:15 IST)
ಮುರಘಾಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲು ಹಿನ್ನಲೆ ಮುರಘಾಶ್ರೀಗಳನ್ನು ಬಂಧನ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಪೋಕ್ಸೋ ಪ್ರಕರಣ ಮತ್ತು ಜಾತಿನಿಂದನೆ ಪ್ರಕರಣ ದಾಖಲಾದರು ಬಂಧನ ಮಾಡುತ್ತಿಲ್ಲ. ಸಾಮಾನ್ಯ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೇ ಪೊಲೀಸರು ಸುಮ್ಮನೆ ಬಿಡುತ್ತಾ ಇರಲಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ. ದಲಿತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಸಂತ್ರಸ್ತರಿರುವ ಬಾಲಮಂದಿರ ಸುತ್ತ ಪೊಲೀಸ್​ ಬಂದೋಬಸ್ತ್ ಮಾಡಲಾಗಿದ್ದು, ಬಾಲಮಂದಿರ ಮುಂದಿನ ರಸ್ತೆಯಲ್ಲಿ ಬ್ಯಾರಿಕೇಡ್​ ಅಳವಡಿಸಲಾಗಿದೆ. ಡಿಎಆರ್​ ಪೊಲೀಸರು ಸೇರಿ ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇಂದು ಸಂತ್ರಸ್ತರಿಂದ ನ್ಯಾಯಾದೀಶರ ಮುಂದೆ 164 ಹೇಳಿಕೆ ದಾಖಲೆ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭದ್ರಾ ಎಡದಂಡೆ ಒಡೆದು ಕೃಷಿ ಭೂಮಿ ಜಲಾವೃತ