Select Your Language

Notifications

webdunia
webdunia
webdunia
webdunia

ವರ್ಗಾವಣೆ ಸಿಗಲಿಲ್ಲವೆಂದು ಮನನೊಂದ ಮುಖ್ಯಪೇದೆ ಆತ್ಯಹತ್ಯೆಗೆ ಶರಣು!

ವರ್ಗಾವಣೆ
ಕಲಬುರ್ಗಿ , ಶುಕ್ರವಾರ, 22 ಜುಲೈ 2016 (09:46 IST)
ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಸರಣಿ ಆತ್ಮಹತ್ಯೆ ಮುಂದುವರೆದಿರುವ ಬೆನ್ನಲ್ಲೇ ವರ್ಗಾವಣೆ ಸಿಗಲಿಲ್ಲವೆಂದು ಮನನೊಂದು ಮುಖ್ಯ ಪೇದೆವೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿಯಲ್ಲಿ ವರದಿಯಾಗಿದೆ.
 
ವಿಜಯಪುರ್ ಜಿಲ್ಲೆಯ ಐಆರ್‌ಬಿ ಬಟಾಲಿಯನ್‌ನಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಾರಾವ್ (46) ಕಲಬುರ್ಗಿ ಹೊರ ವಲಯದ ತಾಜಸುಲ್ತಾನಪುರ್‌ನಲ್ಲಿರುವ ಕೆಎಸ್‌ಆರ್‌ಪಿ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
 
ವಿಜಯಪುರ್ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಗೆ ವರ್ಗಾವಣೆ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
 
ಘಟನಾ ಸ್ಥಳಕ್ಕೆ ಎಸ್‌ಪಿ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಆಕ್ರಮಿತ ಕಾಶ್ಮಿರ ಬಿಟ್ಟು ತೊಲಗಿ: ಪಾಕ್‌ಗೆ ಕೇಂದ್ರ ಸರಕಾರ ಎಚ್ಚರಿಕೆ