Select Your Language

Notifications

webdunia
webdunia
webdunia
webdunia

ಪಾದಚಾರಿಗಳಿಗೆ ಫೈನ್ ಹಾಕ್ತಾರೆ ಹುಷಾರು

ಪಾದಚಾರಿಗಳಿಗೆ ಫೈನ್ ಹಾಕ್ತಾರೆ ಹುಷಾರು
ಬೆಂಗಳೂರು , ಭಾನುವಾರ, 23 ಜನವರಿ 2022 (16:19 IST)
ವಾಹನ ಸವಾರರಿಗೆ ಮಾತ್ರವಲ್ಲ ಇನ್ಮುಂದೆ ಪಾದಾಚಾರಿಗಳಿಗೂ ದಂಡ ವಿಧಿಸಲು ಬೆಂಗಳೂರು ಸಂಚಾರಿ ಪೊಲೀಸ್​ ಇಲಾಖೆ ಚಿಂತನೆ ನಡೆಸಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ರಸ್ತೆಯನ್ನ ದಾಟಬೇಕು. ಜೀಬ್ರಾ ಕ್ರಾಸ್​ ಹೊರತುಪಡಿಸಿ ಎಲ್ಲೆಂದರಲ್ಲಿ ರಸ್ತೆ ದಾಟಿದರೆ, ಅಂತಹವರಿಗೆ ದಂಡ ವಿಧಿಸಲು ಸಂಚಾರಿ ಪೊಲೀಸ್​ ಇಲಾಖೆ ಮುಂದಾಗಿದೆ.
ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ರಸ್ತೆ ದಾಟಿ ಕಳೆದ ವರ್ಷ 69 ಜನ ಮೃತಪಟ್ಟಿದ್ದರು. ಅಪಘಾತಗಳಿಂದ ಜನರ ಜೀವ ಉಳಿಸಲು ಹೊಸ ನಿಯಮ ತರುವ ಪ್ರಸ್ತಾವನೆಯನ್ನು ಸಂಚಾರಿ ಪೊಲೀಸ್​ ಇಲಾಖೆ ತಯಾರು ಮಾಡಿದೆ. ಆದರೆ, ಈ ಹೊಸ ನಿಯಮ ಜಾರಿಗೂ ಮುನ್ನವೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ನಗರದಲ್ಲಿ ಜೀಬ್ರಾ ಕ್ರಾಸ್​ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬ ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಪೊಲೀಸರ ಬೇಟೆ