Webdunia - Bharat's app for daily news and videos

Install App

ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಸುಲಿಗೆ ಮಾಡಿದ ಪೊಲೀಸರು....!

Webdunia
ಗುರುವಾರ, 16 ಮಾರ್ಚ್ 2023 (16:30 IST)
ಕಾನೂನು ಬಾಹಿರ ಕೃತ್ಯ ನಡೆಸಿದ ಬಳಿಕ ಸಿಕ್ಕಿ ಬಿದ್ದೇಬೀಳ್ತಿವೆ ಎಂದು  ಆರೋಪಿಗಳಿಗಿಂತ ಪೊಲೀಸರಿಗೇ ಗೊತ್ತಿರುತ್ತೆ. ಆರೋಪಿಗಳನ್ನ ಟ್ರೇಸ್ ಮಾಡುವ ವಿದ್ಯೆಯನ್ನು ಖಾಕಿ   ಕರಗತ ಮಾಡಿಕೊಂಡಿರುತ್ತೆ.  ಅದು ಗೊತ್ತಿದ್ದೂ ಗೊತ್ತಿದ್ದು ಪೊಲೀಸರೇ ಕೃತ್ಯವನ್ನ ಎಸಗಿದ್ರೆ ಹೇಗಿರುತ್ತೆ ನೀವೇ ಹೇಳಿ. ಹೀಗೆ  ಕೋಟ್ಯಾಂತರ ಮೌಲ್ಯದ ಚಿನ್ನದ ಗಟ್ಟಿಯನ್ನ ಸುಲಿಗೆ ಮಾಡಿದ್ದ ಪೊಲೀಸರು ಈಗ ಅಂದರ್ ಆಗಿದ್ದಾರೆ. ರೈಲ್ವೆ ಪೊಲೀಸರಾದ ಮೌನೇಶ್, ಸಿದ್ದಪ್ಪ ಹಾಗೂ ಇವರಿಗೆ ಸಹಾಯ ಮಾಡಿದ್ದ ಮೌನೇಶ್ ಬಂಧಿತ ಆರೋಪಿಗಳು.ಮೊನ್ನೆ ಒಂದು ಕೋಟಿ 12 ಲಕ್ಷ ಮೌಲ್ಯದ   ಎರಡೂವರೆ ಕೆಜಿ ಚಿನ್ನದ ಗಟ್ಟಿಯನ್ನ ಕಳ್ಳತನ ಮಾಡಿದ್ದರು. ಅಬ್ದುಲ್ ರಜಾಕ್ ,ಮಲ್ಲೇಶ್ ಸುನೀಲ್ ಮೂವರು ತಮ್ಮ ಮಾಲೀಕನ ಅಣತಿಯ ಮೇರೆಗೆ ರಾಯಚೂರಿನಿಂದ ಚಿನ್ನದ ಗಟ್ಟಿ ಖರೀದಿಗೆ ಬಂದಿದ್ರು .ಚಿನ್ನ ಖರೀದಿಯ ಬಳಿಕ ಮರಳಿ ಊರಿಗೆ ಹೋಗಲು ರಾತ್ರಿ 11ಕ್ಕೆ ಬಸ್ ಇರುವುದರಿಂದ ಲಾಡ್ಜ್ ರೂಮಿಗೆ ಹೋಗಿ ಬಳಿಕ 10-45ರ ಸಮಯಕ್ಕೆ ಆನಂದ್ ರಾವ್ ಸರ್ಕಲ್ ಬಳಿ ಬಂದಿದ್ದಾರೆ. ಈ ವೇಳೆ ಏಕಾಏಕಿ ಬಂದಿದ್ದ ಇಬ್ಬರು ನಾವು ಲಿಂಗಸಗೂರು ಪೊಲೀಸರೆಂದು ಹೇಳಿ ಎರಡು ತಿಂಗಳಿನಿಂದ  ಗೋಲ್ಡ್ ಸ್ಮಗಲಿಂಗ್ ಮಾಡುತ್ತಿದ್ದೀರಾ ಎಂದು ಬೆದರಿಸಿ ಪೊಲೀಸರು ಪಟ್ಟುಗಳಂತೆ  ಹಿಂಬದಿ ಪ್ಯಾಂಟ್ ಹಿಡಿದು ಕರೆದೊಯ್ದಿದ್ದರು. ನಂತರ ರೇಸ್ ಕೋರ್ಸ್ , ಚೌಡಯ್ಯ ರಸ್ತೆ ಸೇರಿದಂತೆ ಹಲವೆಡೆ ಇವರನ್ನು ತಳ್ಳಿ ಆಟೋದಲ್ಲಿ ಪರಾರಿಯಾಗಿದ್ದರು. ಮೊದಲಿಗೆ ಇದು ದೂರುದಾರನ ಕಡೆಯವರು ಅಥವಾ ಚಿನ್ನ ನೀಡಿದ್ದ ಬೆಂಗಳೂರಿನ ಶಾಪ್ ಸಿಬ್ಬಂದಿ ಕೃತ್ಯ ಎಂಬುದು ಮೇಲ್ನೋಟಕ್ಕೆ ಅನಿಸಿತ್ತು. ಆದರೆ ಅಸಲಿ ಸಂಗತಿ ತಿಳಿದಿದ್ದೇ ಪೊಲೀಸ್ ಡಾಟಾ ಬೇಸ್ ನಲ್ಲಿರುವ ಮಾಹಿತಿಯಿಂದ. ಪೊಲೀಸರೆಂದು ಹೇಳಿದ್ದರಿಂದ ಪೊಲೀಸ್ ಇಲಾಖಾ ಸಿಬ್ಬಂದಿ ಡಾಟಾ ಬೇಸ್ ನ್ನು ಪರಿಶೀಲನೆ ನಡೆಸಲಾಗಿತ್ತು . ಸಿಸಿಟಿವಿಯಲ್ಲಿ ಕಾಣಿಸಿದ್ದ ಫೇಸ್ ನ್ನು ಸ್ಕ್ಯಾನ್ ಮಾಡಿ ಸೂಪರ್ ಇಂಪೋಝ್ ಮಾಡಿದಾಗ ಆರೋಪಿಗಳ ಚಹರೆ ಸ್ಪಷ್ಟವಾಗಿತ್ತು.  ಆ ಫೊಟೋವನ್ನ ರಾಜ್ಯದ ಎಲ್ಲಾ ವಿಭಾಗದ ಪೊಲೀಸರ ಡಾಟಾಬೇಸ್ ನಲ್ಲಿ ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ‌.2018 ರ ಬ್ಯಾಚ್ ನ  ರೈಲ್ವೆ ಪೊಲೀಸ್ ಆಗಿರುವ ಜ್ಞಾನೇಶ್ ಹಾಗೂ ಸಿದ್ದಪ್ಪ ಚಿನ್ನ ಕದ್ದು ತಮ್ಮ ರೂಂನಲ್ಲಿ ಅಡಿಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.ಇನ್ನು ಸದ್ಯಕ್ಕೆ ಆರೋಪಿಗಳನ್ನ ಬಂಧಿಸಲಾಗಿದೆ. ಖುದ್ದು ಡಿಸಿಪಿ ಲಕ್ಷ್ಮಣ ನಿಂಬರಗಿಯವರೇ ವಿಚಾರಣೆ ನಡೆಸುತ್ತಿರುವ ಹಿನ್ನಲೆ  ಮತ್ತಷ್ಟು ಮಾಹಿತಿ ಹೊರ ಬೀಳಲಿದೆ. ಇದರಲ್ಲಿ ಪೊಲೀಸ್ ಸಿಬ್ಬಂದಿಯ ಜೊತೆ ಇವರಿಗೆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಮೌನೇಶ್ ಎಂಬಾತ ಸಾತ್ ನೀಡಿದ್ದ.‌ಹೀಗಾಗಿ ಮೂವರನ್ನು ಬಂಧಿಸಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments