Publish Date: Thu, 06 Jan 2022 (18:22 IST)
Updated Date: Thu, 06 Jan 2022 (18:24 IST)
ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳನ್ನುದ್ದೇಶಿಸಿl ಮಾತನಾಡುತ್ತಾ COVID ಮಹಾಮಾರಿ ಸೋಂಕು, ಅನಾವೃಷ್ಟಿ ಯಂಥ ಸಮಸ್ಯೆಗಳ ನಡುವೆ ೨೦೨೧ ನೆಯ ವರ್ಷ ಕಳೆದು 2022ಕ್ಕೆ ಮುನ್ನಡೆ ಯುತ್ತಿದ್ದೇವೆ, ಹೊಸ ಹೊಸ ಸವಾಲುಗಳನ್ನೂ ಎದುರಿಸಲು ಸಜ್ಜಾಗಬೇಕು ಎಂದು ಹೇಳಿದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲು ಪೊಲೀಸ್ ಸಿಬ್ಬಂದಿ ಶ್ರಮಿಸಿದ್ದಾರೆ. ಕನ್ನಡ ಚಲನಚಿತ್ರ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಸಮಯದಲ್ಲಿ ಅಚ್ಚುಕಟ್ಟಾದ ಬಂದೋಬಸ್ತ್ ವ್ಯವಸ್ಥೆ ನಡೆಸಿದ್ದಾರೆ ಎಂದು ಪ್ರಶಂಸಿಸಿದರು.
ಇಲಾಖೆಯ ಹಿರಿಯ ಅಧಿಕಾರಿ ಗಳು, ಸಚಿವರೊಂದಿಗೆ ನೂತನ ವರ್ಷದ ಶುಭಾಶಯ ಗಳನ್ನು ಹಂಚಿಕೊಂಡರು.
ರಾಜ್ಯ ಪೊಲೀಸ್ ಮುಖ್ಯಸ್ಥ ಶ್ರೀ ಪ್ರವೀಣ್ ಕುಮಾರ್ ಸೂದ್, ಬೆಂಗಳೂರು ನಗರ ಆಯುಕ್ತ ಶ್ರೀ ಕಮಲ್ ಪಂತ್, ಅಮರ್ ಕುಮಾರ್ ಪಾಂಡೆ , ಅಲೋಕ್ ಮೋಹನ್, Dr ರವೀಂದ್ರ ನಾಥ್ ಹಾಗೂ ಇಲಾಖೆಯ ಇತರ ಅಧಿಕಾರಿಗಳೂ ಹಾಜರಿದ್ದರು.