ಕೋಣನಕುಂಟೆ ರೌಡಿಶೀಟರ್ ಮಧುಸೂದನ್ ಅರೆಸ್ಟ್:

Webdunia
ಬುಧವಾರ, 7 ಜುಲೈ 2021 (14:29 IST)
ಬೆಂಗಳೂರು: "ಗನ್ ಹಿಡಿದರೆ ಫೀಲ್ ಬೇರೆ" ಎನ್ನುತ್ತಾ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಫ್ತಾ ವಸೂಲಿ ಮಾಡ್ತಿದ್ದ ರೌಡಿಶೀಟರ್ ಮಧುಸೂಧನ್ ಅಲಿಯಾಸ್ ಗನ್ ಮಧುನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಜೈಲಿಂದ ರಿಲೀಸ್ ಆಗಿ ಹೊರಬಂದಿದ್ದ ಆರೋಪಿ ಕಳ್ಳತನ ಎಸಗಲು ಇಳಿದಾಗ ಹೆಡೆಮುರಿ ಕಟ್ಟಿದ್ದಾರೆ.
 
ಕೊಲೆ ಕೇಸ್​ನಿಂದ ಹೊರಬಂದ ನಂತರ ರಾಬರಿಗೆ ಇಳಿದಿದ್ದ ಮಧು ಮತ್ತು ಆತನ ಬಳಿಯಿದ್ದ ಪಿಸ್ತೂಲ್ಅ​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣನಕುಂಟೆ ರೌಡಿಶೀಟರ್ ಆಗಿದ್ದ ಮಧುಸೂದನ್ ಅಲಿಯಾಸ್ ಗನ್ ಮಧು ಜಂಬೂಸವಾರಿ ದಿಣ್ಣೆಯಲ್ಲಿ ದರೋಡೆಗೆ ನಿಂತಿದ್ದ ವೇಳೆ ವಶಕ್ಕೆ ಪಡೆದಿದ್ದರು. ಜೈಲಿಗೆ ಹೋಗಿ ಬಂದಿದ್ದಕ್ಕೆ ಹಣಕಾಸಿನ ತೊಂದರೆಯಾಗಿತ್ತು. ಈ ಕಾರಣಕ್ಕೆ ಮತ್ತೆ ಗನ್ ಹಿಡಿದಿದ್ದೆ ಎಂದ ಮಧು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.ಒಂದು ಕೊಲೆ, ಕೊಲೆಯತ್ನ, ರಾಬರಿ ಸೇರಿ ನಾಲ್ಕು ಕೇಸ್​ಗಳಲ್ಲಿ ಭಾಗಿಯಾಗಿದ್ದ ಈತ ಸಿಕ್ಸ್ ಪ್ಯಾಕ್ ಮಾಡಿ ಹವಾ ಮೆಂಟೈನ್ ಮಾಡಿದ್ದನಂತೆ. ಮಚ್ಚು, ಲಾಂಗು, ಡ್ರ್ಯಾಗರ್ ಮುಟ್ಟುತ್ತಿರಲಿಲ್ಲ. ಆದರೆ ಗನ್ ಹಿಡಿದು ರಿಯಲ್ ಎಸ್ಟೇಟ್ ಬಿಲ್ಡರ್​ಗಳಿಗೆ ಹೆದರಿಸಿ ಹಫ್ತಾ ವಸೂಲಿ ಮಾಡಿಕೊಂಡಿದ್ದನಂತೆ."ಗನ್ ಹಿಡಿದುಕೊಂಡರೆ ಆ ಫೀಲೇ ಬೇರೆ ಸರ್" ಎಂಬ ಆರೋಪಿಯ ಮಾತಿಗೆ ಪೊಲೀಸರೇ ದಂಗಾಗಿದ್ದಾರೆ. ಮಧು ಪಾರಿವಾಳ ಸಾಕೋದು, ಟಿಕ್ ಟಾಕ್ ಮಾಡೋ ಹವ್ಯಾಸ ಹೊಂದಿದ್ದನಂತೆ. ಕೇವಲ 25 ವರ್ಷಕ್ಕೆ ಮೋಸ್ಟ್ ವಾಂಟೆಡ್ ಲಿಸ್ಟ್​ಗೆ ಸೇರಿರುವ ರೌಡಿಶೀಟರ್ ಈತನಾಗಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಗಿಲು ಲೇಜೌಟ್‌ ನಿವಾಸಿಗಳನ್ನು ಪ್ರಶ್ನಿಸಿದ ಎಸ್ಆರ್ ವಿಶ್ವನಾಥ್, Video

ಬಳ್ಳಾರಿ ಶೂಟೌಟ್ ಪ್ರಕರಣ ಬೆನ್ನಲ್ಲೇ ದೇವರ ಮೊರೆ ಹೋದ ಜನಾರ್ದನ ರೆಡ್ಡಿ ಪತ್ನಿ

6ರ ಬಾಲಕಿ ಮೇಲೆ ಗ್ಯಾಂಗ್ ರೇಪ್, ಸಾಕ್ಷ್ಯ ನಾಶಕ್ಕೆ ಪಾಪಿಗಳು ಮಾಡಿದ ಕೃತ್ಯಕ್ಕೆ ಲಕ್ನೋ ಶಾಕ್

ಕಲಬುರಗಿ ಕಾರಾಗೃಹದಲ್ಲಿನ ಕೈದಿಗಳ ಅಕ್ರಮ ಚಟುವಟಿಕೆ ವಿಡಿಯೋ ವೈರಲ್, ಮಹತ್ವದ ಬೆಳವಣಿಗೆ

ಸಚಿವ ಸತೀಶ್ ಜಾರಕಿಹೊಳಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಇದೆಂಥಾ ಅವಘಡ

ಮುಂದಿನ ಸುದ್ದಿ
Show comments