Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಹುಚ್ಚರಲ್ಲ, ಸಿಎಂ ಇಬ್ರಾಹಿಂ ಹುಚ್ಚ: ಜಗದೀಶ್ ಶೆಟ್ಟರ್

ಪ್ರಧಾನಿ ಮೋದಿ ಹುಚ್ಚರಲ್ಲ, ಸಿಎಂ ಇಬ್ರಾಹಿಂ ಹುಚ್ಚ: ಜಗದೀಶ್ ಶೆಟ್ಟರ್
ಬೆಂಗಳೂರು , ಸೋಮವಾರ, 13 ಮಾರ್ಚ್ 2017 (13:40 IST)
ಪ್ರಧಾನಿ ಮೋದಿಯನ್ನು ಹುಚ್ಚರೆಂದು ಕರೆದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಸ್ವತಃ ಹುಚ್ಚರಾಗಿದ್ದಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
 
ಹಿರಿಯ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಚಲಾವಣೆಯಿಲ್ಲದ ನಾಣ್ಯದಂತಾಗಿದ್ದಾಗಿದ್ದಾರೆ. ಇಂತಹ ನಾಯಕರು ಎರಡು ಕ್ಷೇತ್ರಗಳಲ್ಲೂ ಠೇವಣಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಇಂತಹ ಶಿಷ್ಯರನ್ನು ಹೊಂದಿದ್ದಾರೆ ಎಂದು ಲೇವಡಿ ಮಾಡಿದರು.
 
ಮಹಾದಾಯಿ ವಿವಾದ ಕುರಿತಂತೆ ಗೋವಾ ಮುಖ್ಯಮಂತ್ರಿಯಾಗಲಿರುವ ಮನೋಹರ್ ಪರಿಕ್ಕರ್ ಅವರೊಂದಿಗೆ ಹಲವು ಬಾರಿ ಚರ್ಚೆ ನಡೆಸಲಾಗಿದೆ. ಗೋವಾ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮತ್ತೊಮ್ಮೆ ಚರ್ಚೆ ನಡೆಸಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಕೂಡಾ ಪರಿಕ್ಕರ್ ಅವರೊಂದಿಗೆ ಚರ್ಚಿಸಿ ವಿವಾದ ಪರಿಹಾರಕ್ಕೆ ಶ್ರಮಿಸಬೇಕಾಗಿದೆ.ಪ್ರಧಾನಿ ಮೋದಿ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆಯಿಲ್ಲ, ಕಾಂಗ್ರೆಸ್‌ಗೆ ಬೆಂಬಲ: ಕುಮಾರಸ್ವಾಮಿ