Webdunia - Bharat's app for daily news and videos

Install App

ಗಣೇಶ ಹಬ್ಬಕ್ಕೆ ಊರಿಗೆ ಹೋಗಲು ಪ್ಲ್ಯಾನ್ ಮಾಡಿದ್ದೀರಾ, ನಿಮಗೆ ಕಾದಿದೆ ಶಾಕ್

Krishnaveni K
ಸೋಮವಾರ, 2 ಸೆಪ್ಟಂಬರ್ 2024 (11:17 IST)
ಬೆಂಗಳೂರು: ಈ ವಾರಂತ್ಯಕ್ಕೆ ಗಣೇಶ ಹಬ್ಬಕ್ಕೆ ಎರಡು ದಿನ ರಜೆ ಇದೆ, ಊರಿನಲ್ಲಿ ಹಬ್ಬ ಆಚರಿಸೋಣ ಎಂದು ಬೆಂಗಳೂರಿಗರು ಅಂದುಕೊಂಡಿದ್ದರೆ ಅವರಿಗೆ ಶಾಕ್ ಕಾದಿದೆ.

ವಾರಂತ್ಯದಲ್ಲಿ ಸುದೀರ್ಘ ರಜೆಯಿದ್ದರೆ ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಗಳಿಗೆ ಬೇಡಿಕೆ ಹೆಚ್ಚುತ್ತದೆ. ಇದೀಗ ಅದೇ ಪರಿಸ್ಥಿತಿಯಾಗಿದೆ. ಚೌತಿ ಹಬ್ಬಕ್ಕೆ ಊರಿಗೆ ಹೋಗಲು ಸಾಕಷ್ಟು ಜನ ತುದಿಗಾಲಲ್ಲಿ ನಿಂತಿದ್ದರು. ಆದರೆ ಊರಿಗೆ ಹೋಗಲು ತಯಾರಾಗಿರುವವರಿಗೆ ಬಸ್ ಟಿಕೆಟ್ ದರ ಶಾಕ್ ನೀಡಿದೆ.

ಈಗಾಗಲೇ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಬಹುತೇಕ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ವಿಶೇಷ ಬಸ್ ಹಾಕಿದ್ದರೂ ಅದೂ ಬಿಸಿ ದೋಸೆಯಂತೆ ಖಾಲಿಯಾಗುತ್ತಿದೆ. ಹೀಗಾಗಿ ಖಾಸಗಿ ಬಸ್ ನತ್ತ ಜನ ಮುಖ ಮಾಡಿದ್ದಾರೆ. ಆದರೆ ಖಾಸಗಿ ಬಸ್ ನ ದರ ಸಾಮಾನ್ಯವಾಗಿ ಇರುವುದಕ್ಕಿಂತ ದುಪ್ಪಟ್ಟಾಗಿದೆ.

ಬೆಂಗಳೂರಿನಿಂದ ಮಂಗಳೂರು, ವಿಜಯಪುರಕ್ಕೆ 700 ರೂ. ಬಸ್ ಟಿಕೆಟ್ ದರವಿದ್ದರೆ ಈಗ 1400-1500 ರೂ.ವರೆಗೆ ತಲುಪಿದೆ. ಹುಬ್ಬಳ್ಳಿ ಕಡೆಗೆ 900 ರೂ.ಗಳಿದ್ದಟಿಕೆಟ್ ದರ 1300 ರೂ. ದಾಟಿದೆ. ಕೆಎಸ್ ಆರ್ ಟಿಸಿ ಕೂಡಾ ಸಾಮಾನ್ಯ ದಿನಗಳಿಗಿಂತ ಹೆಚ್ಚು ದರ ವಸೂಲಿ ಮಾಡುತ್ತಿವೆ. ಆದರೆ ಖಾಸಗಿ ಬಸ್ ಗಳಷ್ಟು ದುಬಾರಿಯಲ್ಲ ಎನ್ನಬಹುದು. ಆದರೂ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಟಿಕೆಟ್ ದರ ನೋಡಿಯೇ ಹಿಂಜರಿಯುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments