Webdunia - Bharat's app for daily news and videos

Install App

ಹೊಸಕೆರೆಹಳ್ಳಿ ಕೆರೆಯಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಪ್ಲಾನ್

Webdunia
ಶನಿವಾರ, 25 ಮಾರ್ಚ್ 2023 (14:38 IST)
ಸಿಲಿಕಾನ್ ಸಿಟಿಯ ಕೆರೆಗಳನ್ನ ರಕ್ಷಿಸಬೇಕಿದ್ದ ಬಿಬಿಎಂಪಿ, ಇದೀಗ ತಾನೇ ಕೆರೆಗಳ ಒತ್ತುವರಿ ಮಾಡೋಕೆ ಮುಂದಾಯ್ತಾ ಅನ್ನೋ ಅನುಮಾನ ಮೂಡ್ತಿದೆ. ಜನಸಾಮಾನ್ಯರ ವಿರೋಧದ ನಡುವೆಯೂ ರಸ್ತೆ ಮಾಡಲು ಮುಂದಾಗಿದ್ದ ಪಾಲಿಕೆ, ಇದೀಗ ಜನಾಕ್ರೋಶಕ್ಕೆ ಮಣಿದು ಎಚ್ಚೆತ್ತುಕೊಂಡಿದೆ. ಒಂದೆಡೆ ವಿಶಾಲವಾದ ಮೈದಾನದಂತಿರೋ ಬೃಹತ್ ಜಾಗ, ಮತ್ತೊಂದೆಡೆ ಅದೇ ಜಾಗದಲ್ಲಿ ಸ್ಕೇಲ್ನಿಂದ ಗೆರ ಎಳೆದಂತೆ ಮಧ್ಯಭಾಗದಲ್ಲಿ ನಡೆಯುತ್ತಿರೋ ರಸ್ತೆ ಕಾಮಗಾರಿ. ಈ ದೃಶ್ಯವನ್ನ ನೋಡಿ ಇದ್ಯಾವುದೋ ಹೈವೇ ಮಾಡೋಕೆ ಪ್ಲಾನ್ ಮಾಡಿರೋ ಸ್ಥಳ ಅಂತಾ ಯಾಮಾರಬೇಡಿ. ರಾಜ್ಯ ರಾಜಧಾನಿಯ ಕೆರೆಗಳ ರಕ್ಷಣೆ ಮಾಡಬೇಕಿದ್ದ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯತನದ ಪರಮಾವಧಿಯೇ ಈ ಕಾಮಗಾರಿ ಅಂತಾ ಸ್ಥಳೀಯರು ಆರೋಪಿಸಿಸದ್ದಾರೆ.

ಜಾಗ ಇರೋದು ಬೆಂಗಳೂರಿನಿಂದ ಕನಕಪುರದ ಕಡೆ ಸಾಗೋ ನಡುವೆ ಸಿಗೋ ಹೊಸಕೆರೆಹಳ್ಳಿಯಲ್ಲಿ. ಮುಖ್ಯವಾದ ವಿಷಯ ಅಂದ್ರೆ ಇದು ರಸ್ತೆ ಮಾಡೋಕೆ ಗುರುತು ಮಾಡಿರೋ ಜಾಗ ಅಲ್ಲಾ. ಬದಲಿಗೆ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆಯೇ ಪಾಲಿಕೆ ಅಧಿಕಾರಿಗಳು ನಿಯಮಗಳನ್ನ ಗಾಳಿಗೆ ತೂರಿ ನಿರ್ಮಿಸುತ್ತಿರೋ ರಸ್ತೆ ಇದು. ಇದೀಗ ಪಾಲಿಕೆಯ ಈ ನಡೆ ಅಲ್ಲಿನ ಸ್ಥಳೀಯರನ್ನ ಕೆರಳುವಂತೆ ಮಾಡಿದೆ. ಇತ್ತ ಸುಮಾರು 47 ಎಕರೆ ವಿಸ್ತೀರ್ಣ ಇರೋ ಈ ಕೆರೆ ಬರೋಬ್ಬರಿ 500 ವರ್ಷಗಳ ಇತಿಹಾಸ ಹೊಂದಿದೆ. ಆದ್ರೆ ಪಾಲಿಕೆ ಅಧಿಕಾರಿಗಳು ಖಾಸಗಿಯವರ ಅನುಕೂಲಕ್ಕೆ ರಸ್ತೆ ಮಾಡ್ತಿರೋದಾಗಿ ಸ್ಥಳೀಯರು ಆರೋಪ ಮಾಡ್ತಿದ್ದಾರೆ. ಇನ್ನು ಕಾಮಗಾರಿಯ ಬಗ್ಗೆ ಲೇಕ್ ಇಂಜಿನಿಯರ್ ಕೇಳಿದ್ರೆ, ನಮಗೆ ಕಾಮಗಾರಿ ನಡೆತ್ತಿರೋದೆ ಗೊತ್ತಿಲ್ಲ ಅಂತಿರೋದು ಪಾಲಿಕೆ ಅನುಮತಿ ಇಲ್ಲದೇ ಕೆಲಸ ನಡೀತಾ ಅನ್ನೋ ಗುಮಾನಿ ಮೂಡಿಸಿದೆ.

ಸದ್ಯ ಈ ಕಾಮಗಾರಿ ವಿರುದ್ಧ ಸ್ಥಳೀಯರು ತೀವ್ರ ಹೊರಹಾಕಿದ್ದು, ಕೋರ್ಟ್ ಮೆಟ್ಟಿಲೇರೋಕು ಸಿದ್ಧತೆ ನಡೆಸಿದ್ರು. ಸ್ಥಳೀಯರ ತೀವ್ರ ವಿರೋಧ ಬಂದ ಬಳಿಕ ಗುತ್ತಿಗೆದಾರನಿಗೆ  ಕರೆ ಮಾಡಿರೋ ಲೇಕ್ ಇಂಜಿನಿಯರ್ ಕೆಲಸ ಸ್ಥಗಿತಕ್ಕೆ ಸೂಚಿಸಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಕಾಮಗಾರಿಗೇನೋ ಬ್ರೇಕ್ ಬಿದ್ದಿದೆ, ಆದ್ರೆ ಸಾರ್ವಜನಿಕ ಆಸ್ತಿಗಳನ್ನ ಕಾಪಾಡಬೇಕಿದ್ದವರೇ ಈ ರೀತಿ ಕೆಲಸಕ್ಕೆ ಸಾಥ್ ನೀಡಿದ್ದು ಎಷ್ಟು ಸರಿ ಅಂತಾ ಜನರು ಪ್ರಶ್ನಿಸುತ್ತಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy: ಹರಿದ ಬಟ್ಟೆ, ಕೈಯಿಂದ ಎದೆ ಮುಚ್ಚಿಕೊಂಡಿದ್ದ ಯುವತಿ: ಚಿನ್ನಸ್ವಾಮಿಯಲ್ಲಿ ನಡೆದ ಶಾಕಿಂಗ್ ಘಟನೆಯಿದು

Rahul Gandhi: ಸರೆಂಡರ್ ಆಗಿದ್ದು ನೆಹರೂ, ನರೇಂದ್ರ ಅಲ್ಲ: ರಾಹುಲ್ ಗಾಂಧಿಗೆ ನೆಟ್ಟಿಗರಿಂದ ತಿರುಗೇಟು

ಕುಮಾರಸ್ವಾಮಿ ಕಣ್ಣೀರನ್ನು ವ್ಯಂಗ್ಯ ಮಾಡಿದ್ದ ಡಿಕೆಶಿ: ಈಗ ನಿಖಿಲ್ ಕುಮಾರಸ್ವಾಮಿ ಕೊಟ್ರು ಟಾಂಗ್

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಆರ್ ಸಿಬಿ ವಿರುದ್ಧವೇ ಕೇಸ್

ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಮುಂದಿನ ಸುದ್ದಿ
Show comments