Webdunia - Bharat's app for daily news and videos

Install App

ಎಂಟಿಬಿ ನಾಗರಾಜ್ ಗೆ ಮಾನ ಮಾರ್ಯಾದೆ, ನಾಚಿಕೆ ಅನ್ನೋದೆ ಇಲ್ಲ !

Webdunia
ಸೋಮವಾರ, 11 ನವೆಂಬರ್ 2019 (11:10 IST)
ಹೊಸಕೋಟೆ : ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಮಾನ ಮಾರ್ಯಾದೆ, ನಾಚಿಕೆ ಅನ್ನೋದೆ ಇಲ್ಲ ಎಂದು ಅವರ ಸಹೋದರ ಪಿಳ್ಳಣ್ಣ ವಾಗ್ದಾಳಿ ನಡೆಸಿದ್ದಾರೆ.



ಎಂಟಿಬಿ ನಾಗರಾಜ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಸಿದ್ದರಾಮಯ್ಯ ತನ್ನ ಎದೆಯಲ್ಲಿದ್ದಾರೆ ಅಂತಿದ್ದ, ಬಳಿಕ ಜನರನ್ನು ಎದೆಯಲ್ಲಿಟ್ಟುಕೊಂಡಿದ್ದೇನೆ ಅಂತಿದ್ದ. ಈಗ ಬಿಎಸ್ ವೈಯನ್ನು ತನ್ನ ಎದೆಯಲ್ಲಿಟ್ಟುಕೊಂಡಿದ್ದೇನೆ ಅಂತಾನೆ. ಎಂಟಿಬಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ.

 

ಅವನ ಜೊತೆ ಹುಷಾರಾಗಿರು ಎಂದು ನಮ್ಮ ತಂದೆ ಹೇಳಿದ್ರು. ಎಂಟಿಬಿ ನಿನ್ನನ್ನೇ ಸಂಬಳಕ್ಕೆ ಇಟ್ಟುಕೊಳ್ತಾನೆ ಎಂದು ಹೇಳಿದ್ರು, ಕುರಿ ಕಡಿಯುವವರು ಒಂದು ಕ್ಷಣ ಯೋಚಿಸಿ ಕಡೀತಾರೆ. ಆದರೆ ಇವನು ಯೋಚನೆ ಮಾಡದೆ ಕಡಿತಾನೆ. ಅವನು ಕಟುಕ, ತಂತ್ರಿ, ಚಂಡಾಲ. ಇವನಿಗಾಗಿ ಏಟು ತಿಂದು ಹೋರಾಟ ಮಾಡಿ ಗೆಲ್ಲಿಸಿದ್ವಿ. ಅನ್ನ ಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಚೂರಿ ಹಾಕಿದ್ದಾನೆ ಎಂದು ಅವರು ಸಹೋದರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments