Select Your Language

Notifications

webdunia
webdunia
webdunia
webdunia

ಫಾಲಿ ನಾರಿಮನ್ ಒಬ್ಬ ಪಲಾಯನವಾದಿ: ಈಶ್ವರಪ್ಪ ವಾಗ್ದಾಳಿ

ಫಾಲಿ ನಾರಿಮನ್ ಒಬ್ಬ ಪಲಾಯನವಾದಿ: ಈಶ್ವರಪ್ಪ ವಾಗ್ದಾಳಿ
ಬೆಂಗಳೂರು , ಸೋಮವಾರ, 3 ಅಕ್ಟೋಬರ್ 2016 (14:52 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಈ ಕೂಡಲೇ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಅವರನ್ನು ಬದಲಾಯಿಸಿ. ಫಾಲಿ ನಾರಿಮನ್ ಒಬ್ಬ ಪಲಾಯನವಾದಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.  
 
ಕಾವೇರಿ ವಿಚಾರವಾಗಿ ಪರಿಷತ್‌ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಆದೇಶ ಬಂದ ಬಳಿಕ ಪುಸ್ತಕ ಬಿಸಾಕಿ ಹೋಗಲು ನಾರಿಮನ್‌ ಅವರೇ ಬೇಕಾ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರವಾಗಿ ವಾದ ಮಂಡಿಸಲು ನಮ್ಮಲೇ ಸಾಕಷ್ಟು ಮೇಧಾವಿ ವಕೀಲರಿದ್ದಾರೆ. ಫಾಲಿ ನಾರಿಮನ್ ಒಬ್ಬ ಪಲಾಯನವಾದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಾವೇರಿ ನಮ್ಮ ನೆಲದವಳು, ನಾವು ಡ್ಯಾಂ ಕಟ್ಟಿದ್ದೇವೆ. ಆದರೆ, ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಪದೇ ಪದೇ ತೀರ್ಪು ನೀಡುತ್ತಿದೆ. ನಾವು ಎಲ್ಲಿಯವರೆಗೂ ಹೋರಾಟ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಈ ಬೆಕ್ಕಿನ ಫೋಟೋ ಶೇರ್ ಮಾಡಿದರೆ ನಿಮ್ಮ ಫೇಸ್‌ಬುಕ್ ಡಿಎಕ್ಟಿವೇಟ್!