Select Your Language

Notifications

webdunia
webdunia
webdunia
webdunia

ಆಧಾರ್ ಗಾಗಿ ಚರಂಡಿ ಮೇಲೆ ಮಲಗಿದ ಜನ!

ಆಧಾರ್ ಗಾಗಿ ಚರಂಡಿ ಮೇಲೆ ಮಲಗಿದ ಜನ!
ರಾಯಚೂರು , ಶುಕ್ರವಾರ, 28 ಸೆಪ್ಟಂಬರ್ 2018 (15:04 IST)
ಆಧಾರ ಕಾಡ್೯ ಗಾಗಿ ಚರಂಡಿ ಮೇಲೆ ಜನರು ಮಲಗಿದ ಘಟನೆ ವರದಿಯಾಗಿದೆ.

ಆಧಾರ್ ಕಾರ್ಡಿಗಾಗಿ ಜನರು ಪರದಾಡುವಂತಾಗಿದೆ. ಹಗಲು ರಾತ್ರಿ ಆಧಾರ್ ಗೆ ಜನರ  ಪರದಾಟ ನಡೆಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಎಸ್ ಬಿ ಐ ಬ್ಯಾಂಕಿನ ಮುಂಭಾಗ  ಚರಂಡಿಯ  ಮೇಲೆ ಜನರು ಮಲಗಿದ್ದಾರೆ. ಆಧಾರ್ ಕಾರ್ಡಿಗಾಗಿ ಸರತಿ ಸಾಲಿನಲ್ಲಿ ಹಗಲು- ರಾತ್ರಿ ಜನರು ಕಾಯುವಂತಾಗಿದೆ.

ಮಕ್ಕಳ ಮಹಿಳೆಯರ  ಗೋಳಾಟ ಕೇಳಿಬರುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ.  

ಆಧಾರ್ ಕಾರ್ಡ್ ಮಾಡಿಸಲು ಇಡೀ ರಾತ್ರಿ ಶಾಲೆ ಬಿಟ್ಟು ಮಕ್ಕಳೂ ಸಹ ಕಾಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ತಿಳಿದಿದ್ದರು ಬೇಜವಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಜನರು ದೂರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜಮನೆತನದ ಸಂಪ್ರದಾಯವನ್ನು ಬ್ರೇಕ್ ಮಾಡಿದ ನಟಿ ಯುವರಾಣಿ ಮೇಘನ್‌ ಮರ್ಕೆಲ್‌