Webdunia - Bharat's app for daily news and videos

Install App

ಶುದ್ಧ ಕುಡಿಯುವ ನೀರು ಸಿಗದೇ ಜನರ ಪರದಾಟ, ಅಧಿಕಾರಿಗಳ ವಿರುದ್ಧ ಆಕ್ರೋಶ

Webdunia
ಬುಧವಾರ, 6 ಜುಲೈ 2022 (20:41 IST)
ಬೆಂಗಳೂರಿನಲ್ಲಿರೋ ಸಮಸ್ಯೆಗಳು ಒಂದಾ..ಎರಡಾ? ಕುಡಿಯೋಕೂ ಶುದ್ದ ನೀರು ಸಿಗ್ತಿಲ್ಲ ರಾಜಧಾನಿಯಲ್ಲಿ. ಕಲುಷಿತ ನೀರು ಕುಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದು, ಆ ಏರಿಯಾದ ಜನ, ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಕೆಂಡಮಂಡಲರಾಗಿದ್ದಾರೆ. ಬೆಂಗಳೂರಲ್ಲಿ ಶುದ್ಧ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್ನ ಸಂಜಯನಗರದಲ್ಲಿ ಕಾವೇರಿ ನೀರು ಕಲುಷಿತವಾಗಿ ಬರ್ತಿದೆ. ಕಲುಷಿತ ನೀರು ಕುಡಿದ ಏರಿಯಾದ ಜನರಿಗೆ, ವಾಂತಿ- ಭೇದಿ,  ಹೊಟ್ಟೆ ನೋವು ಶುರುವಾಗಿದೆ. 
 
ವಾ : ಈ ನೀರು ನೋಡಿ ಒಮ್ಮೆ. ಇದನ್ನ ಕುಡಿಯೋಕೆ ಆಗುತ್ತಾ. ಗಲೀಜು ತುಂಬಿರುವ ಈ ನೀರು ಕುಡಿದ್ರೆ, ಜೀವಕ್ಕೆನೆ ಕುತ್ತು. ಜಲಮಂಡಳಿಯಿಂದ ಪೂರೈಕೆಯಾಗುವ ಈ ಕಾವೇರಿ ನೀರನ್ನೇ ಸಂಜಯನಗರ ಕಾಲೋನಿ ಜನ ಕುಡಿತಾರೆ. ಮನೆಗಳ ಕೆಲಸಕ್ಕೂ ಬಳಸ್ತಾರೆ. ಈ ಕುಡಿದ ಬಳಿಕ ವಾಂತಿ, ಬೇದಿ, ಹೊಟ್ಟೆನೋವು, ಲೂಸ್ ಮೋಷನ್ ಆಗ್ತಿದೆ ನಾನು ಎರಡು ಬಾರಿ ಆಸ್ಪತ್ರೆ ಸೇರಿದ್ದಿನಿ. ಒಂದು ತಿಂಗಳ ಹಿಂದೆ ಆರೋಗ್ಯ ಹಾಳಾಗಿ ನಮ್ ಏರಿಯಾದ ಲಕ್ಷ್ಮಮ್ಮ ಮೃತಪಟ್ಟರು ಸ್ಥಳೀಯರು ಆಕ್ರೋಶ ಹೊರ ಹಾಕ್ತಿದ್ದಾರೆ. ಏರಿಯಾದಲ್ಲಿ ಶುದ್ದ ಕುಡಿಯುವ ನೀರಿನ್ನ ಪೂರೈಕೆ ಮಾಡಲು ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಈ ಟ್ಯಾಂಕರ್ ನಲ್ಲೂ ಇದೇ ಕಲುಷಿತ ನೀರು. ಮಕ್ಕಳು, ವಯೋವೃದ್ದರು,  ನೀರು ಬಿಸಿ ಮಾಡ್ಕೊಂಡೇ ಕುಡಿತಾರೆ. ಇದೇ ಏರಿಯಾದಲ್ಲಿ ಶುದ್ಧಕುಡಿಯುವ ನೀರಿನ ಘಟಕವಿದ್ರೂ ಅದು ಕಾರ್ಯನಿರ್ವಹಿಸ್ತಿಲ್ಲ. ಹೀಗಾಗಿ ಪ್ರತ್ಯೇಕ ಟ್ಯಾಂಕರ್, ಕುಡಿಯುವ ನೀರಿನ ಘಟಕದಿಂದ ನೀರು ತರಿಸಿಕೊಳ್ತಿದ್ದಾರೆ. ನಲ್ಲಿ ಆನ್ ಮಾಡಿದ್ರೆ ಆರಂಭದ ೧೦ ನಿಮಿಷ ಬರೀ ಕೊಳಚೆ ನೀರೇ ಬರುತ್ತೆ. ಇಂತಹ ನೀರು ಕುಡಿದು ಹೇಗೆ ತಾನೆ ಆರೋಗ್ಯ ಸರಿ ಇರುತ್ತೆ.? ಈ ಭಾಗದ ಸಂಬಂಧಪಟ್ಟ  ಅಧಿಕಾರಿಗಳಾಗ್ಲಿ, ಜನಪ್ರತಿನಿಧಿಗಳಾಗ್ಲಿ  ಇವರೆಗೆ ಸ್ಪಂದಿಸೋದೆ ಇರೋದು ದುರಂತವೇ ಸರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ದಲಿತ ವಿರೋಧಿಯಲ್ಲ, ತಪ್ಪಾಗಿದ್ದರೆ ಕ್ಷಮಿಸಿ ಎಂದ ಜಿಟಿ ದೇವೇಗೌಡ

ಬಿಜೆಪಿ ಮತಕಳ್ಳತನದಿಂದ ಅಧಿಕಾರ ಉಳಿಸಿಕೊಂಡಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ

ಬೀದಿ ನಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪುನ ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರ

ಕಲಾಸಿಪಾಳ್ಯ: ಕೇಸರಿ ಶಾಲು ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ, ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments