Webdunia - Bharat's app for daily news and videos

Install App

ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸುತ್ತಿರು ಜನರು…

Webdunia
ಸೋಮವಾರ, 23 ಜುಲೈ 2018 (16:36 IST)
ಅವರೆಲ್ಲ ಮಳೆಬಂದರೆ ಸಾಕು ಜೀವ ಅಂಗೈಯಲ್ಲಿ ಹಿಡಿದುಕೊಂಡು ನದಿ ದಾಟಬೇಕು. ಏನಾದರೂ ಒಂದು ಕ್ಷಣ ಎಚ್ಚರಿಕೆ ಇಲ್ಲದಿದ್ದರೆ ಆವರು ನಿಜಕ್ಕೂ ಜಲಸಮಾಧಿ. ಹೀಗೆ ಒಂದಲ್ಲ, ಎರಡಲ್ಲ, ಹತ್ತು ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಅಲ್ಲಿನ ಜನರು.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಸಮೀಪದ ಮಳಗಿ ಗ್ರಾಮದ ಜನರುಏನಾದರೂ ದಿನನಿತ್ಯದ ವಸ್ತುಗಳನ್ನು ತರಬೇಕಾದರೆ ರಟ್ಟಿಹಳ್ಳಿಗೆ ಬರಬೇಕುಅಲ್ಲದೆ ಗ್ರಾಮದಲ್ಲಿ 5ನೇ ತರಗತಿಯ ವರೆಗೆ ಮಾತ್ರ ಶಾಲೆ ಇದೆ. ಮುಂದಿನ ವಿಧ್ಯಾಭ್ಯಾಸ ಮಾಡಲು ರಟ್ಟಿಹಳ್ಳಿಗೆ ಬರಬೇಕು. ರಟ್ಟಿಹಳ್ಳಿ ನಡುವೆ ಕುಮದ್ವತಿ ನದಿ ಇದೆ. ಮಳೆಬಂದಾಗ ಅದು ತುಂಬಿ ಹರಿಯುತ್ತದೆ. ಮಳಗಿ ಗ್ರಾಮದಿಂದ ಜನರು, ವಿದ್ಯಾರ್ಥಿಗಳು ಕುಮದ್ವತಿ ನದಿ ದಾಟಿ ಹೋಗಬೇಕು. ಗ್ರಾಮದ ಜನಕ್ಕೆ ಓಡಾಡುವ ಸಲುವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆ ನಿರ್ಮಾಣ ಮಾಡಿ ನಾಲ್ಕು ವರ್ಷವಾಗಿದೆ. ಸೇತುವೆಯ ಮುಂದೆ ಹಿಂದೆ ರಸ್ತೆ ಮಾಡಿಲ್ಲ. ಅದಕ್ಕಾಗಿ ನೀರನ್ನ ದಾಟಿ ಹೋಗಬೇಕಾದ ಪರಿಸ್ಥಿತಿ ಇದೆ.  
ಸೇತುವೆ ನೆಪಮಾತ್ರಕ್ಕೆ ಇದೆ. ಸೇತುವೆ ಸಮನಾಗಿ ರಸ್ತೆ ಮಾಡುವುದಕ್ಕೆ ಕಳೆದ ನಾಲ್ಕು ವರ್ಷಗಳಿಂದ ಆಗಿಲ್ಲ. ಇದರಿಂದ ಮಗಳಿ ಗ್ರಾಮದ ಜನರು ಲೋಕಪಯೋಗಿ ಇಲಾಖೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮಳೆ ಬಂದರೆ ಕುಮುದ್ವತಿ ನದಿತುಂಬಿ ಹರಿಯುತ್ತದೆ. ಇದರಿಂದ ಶಾಲೆಗೆ ಹೊಗುವ ಮಕ್ಕಳು ರಜೆ ಹಾಕಿ ಮನೆಯಲ್ಲಿ ಇರುವಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಶಾಲಾ ಶಿಕ್ಷಕಿಯರು.

ಪ್ರತಿನಿತ್ಯ ತೆಪ್ಪದ ಮೂಲಕ ಇಲ್ಲಿನ ಜನರು, ವಿದ್ಯಾರ್ಥಿಗಳು, ಜೀವ ಭಯದಿಂದ ಓಡಾಡುವಂತಾಗಿದೆ. ಸೇತುವೆ ಇದ್ದು ಕೆಲಸಕ್ಕೆ ಬಾರದಂತಾಗಿದೆ. ಒಟ್ಟಾರೆ ಮಗಳಿ ಗ್ರಾಮಕ್ಕೆ ಸರಿಯಾದ ರೀತಿಯಲ್ಲಿ ರಸ್ತೆ ಮಾಡಿ, ವಿದ್ಯಾರ್ಥಿಗಳು, ಜನರನ್ನ ಜೀವ ಭಯದಿಂದ ಮತ್ತು ನೆಮ್ಮದಿಯಿಂದ ಜೀವನ ನಡೆಸುವುದಕ್ಕೆ ಇಲ್ಲಿ ಅಧಿಕಾರಿಗಳು, ಜನ ಪ್ರತಿನಿಧಿಗಳು ಕ್ರಮ ಕೈಗೋಳಬೇಕಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Rains: ಈ ಆರು ಜಿಲ್ಲೆಗಳಿಗೆ ನಾಳೆಯೂ ಹವಾಮಾನ ಎಚ್ಚರಿಕೆ ಗಮನಿಸಿ

Maharashtra: ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶಿಗಳ ಬಂಧನ

Air India ವಿಮಾನ ದುರಂತ: ಮೃತ ನಾಲ್ವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಇವರೇ

ಕೇರಳದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ, ರೆಡ್‌ ಅಲರ್ಟ್ ಘೋಷಣೆ

NEET result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ವೀಕ್ಷಣೆ ಮಾಡಿ

ಮುಂದಿನ ಸುದ್ದಿ
Show comments