Select Your Language

Notifications

webdunia
webdunia
webdunia
webdunia

ಬಿಜೆಪಿ ಸೋಲಿಗೆ ಈ ಮೂವರು ನಾಯಕರಿಗೆ ಹಿಡಿ ಶಾಪ ಹಾಕಿದ ಅಭಿಮಾನಿಗಳು

ಬಿಜೆಪಿ ಸೋಲಿಗೆ ಈ ಮೂವರು ನಾಯಕರಿಗೆ ಹಿಡಿ ಶಾಪ ಹಾಕಿದ ಅಭಿಮಾನಿಗಳು
ಬೆಂಗಳೂರು , ಶನಿವಾರ, 13 ಮೇ 2023 (17:51 IST)
ಬೆಂಗಳೂರು: ಕರ್ನಾಟಕ ವಿಧಾನಸಭೆ  ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ಬಿಜೆಪಿ ಅಧಿಕಾರ ಕಳೆದುಕೊಂಡಿದೆ.

ಬಿಜೆಪಿ ಸೋಲಿಗೆ ಪಕ್ಷದ ಅಭಿಮಾನಿಗಳು ಈ ಮೂವರು ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅವರೆಂದರೆ ಬಿ.ಎಲ್.ಸಂತೋಷ್, ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮೂವರು ನಾಯಕರ ಸ್ವ ಪ್ರತಿಷ್ಠೆಯಿಂದಾಗಿಯೇ ಚುನಾವಣೆಯಲ್ಲಿ ಸೋಲಾಗಿದೆ ಎಂದಿದ್ದಾರೆ. ಕೆಲವೆಡೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಈ ಮೂವರು ನಾಯಕರ ಪ್ರತಿಷ್ಠೆಯಿಂದಲೇ ತಪ್ಪಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು ಎಂಬ ಆರೋಪ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನರ ತೀರ್ಮಾನಕ್ಕೆ ಬದ್ಧ- ಜಗದೀಶ್ ಶೆಟ್ಟರ್