Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಿಂದ ಧರ್ಮಯುದ್ಧಕ್ಕೆ ಆಹ್ವಾನ: ಸ್ವರೂಪಾನಂದ ಸ್ವಾಮೀಜಿ

ಪಾಕಿಸ್ತಾನದಿಂದ ಧರ್ಮಯುದ್ಧಕ್ಕೆ ಆಹ್ವಾನ: ಸ್ವರೂಪಾನಂದ ಸ್ವಾಮೀಜಿ
ಚಿಕ್ಕಬಳ್ಳಾಪುರ , ಬುಧವಾರ, 12 ಅಕ್ಟೋಬರ್ 2016 (12:35 IST)
ಅಮಾಯಕರ ಸಾವಿಗೆ ಕಾರಣವಾಗುತ್ತಿರುವ ಪಾಕ್ ಧರ್ಮಯುದ್ಧಕ್ಕೆ ಆಹ್ವಾನಿಸುತ್ತಿದೆ. ಆದರೆ, ಈ ಧರ್ಮಯುದ್ಧದಲ್ಲಿ ಪಾಕಿಸ್ತಾನ ಗೆಲ್ಲಲು ಸಾಧ್ಯವಿಲ್ಲ ಎಂದು ದ್ವಾರಕಾ ಪೀಠದ ಸ್ವರೂಪಾನಂದ ಸ್ವಾಮೀಜಿ ಹೇಳಿದರು. 
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ದೇವತೆಗಳು ಅಸುರರನ್ನು ಕೊಲ್ಲುವುದರ ಸಂಕೇತವಾಗಿ ವಿಜಯದಶಮಿ ಆಚರಿಸುತ್ತೇವೆ. ಗೋ ರಕ್ಷಣೆ ಇಂದಿನ ಅಗತ್ಯ. ಗೋವಿನ ಮೂತ್ರದಲ್ಲಿ ಕಾಯಿಲೆ ಗುಣ ಪಡಿಸುವ ಶಕ್ತಿ ಇದೆ. ಕೂಡಲೇ ದೇಶದಲ್ಲಿ ನಡೆಯುತ್ತಿರುವ ಗೋ ಹತ್ಯೆ ಹಾಗೂ ಗೋ ರಫ್ತನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
 
ಮಕ್ಕಳಿಗೆ ರಾಮಾಯಣ ಹಾಗೂ ಮಹಾಭಾರತ ಓದಿಸಿ. ಧರ್ಮಾಚರಣೆ ಬೋಧಿಸುವುದಕ್ಕಿಂತ ಅದನ್ನೇ ಜೀವನದಲ್ಲಿ ಅನುಸರಿಸಿದ ಶ್ರೀರಾಮ ನಮಗೆ ಆದರ್ಶವಾಗಲಿ ಎಂದು ಹೇಳಿದರು. 
 
ಮುನುಷ್ಯನಲ್ಲಿ ಶುದ್ಧ ಆಲೋಚನೆ ಬರಬೇಕು. ಅದಕ್ಕೆ ಮೊದಲು ದೇಹ ಪವಿತ್ರವಾಗಬೇಕು. ಬೆವರು ಸುರಿಸಿ ದುಡಿಯುವುದನ್ನು ಜನರು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತನ ಮೇಲೆ ನಿರ್ಬಂಧ: ಪಾಕ್ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತ ಪಡಿಸಿದ ಅಮೇರಿಕಾ