Select Your Language

Notifications

webdunia
webdunia
webdunia
webdunia

ಖರ್ಗೆ ವಿರುದ್ಧ ಕೆಂಡವಾಗುತ್ತಿದೆ ಆಕ್ರೋಶ

ಖರ್ಗೆ ವಿರುದ್ಧ ಕೆಂಡವಾಗುತ್ತಿದೆ ಆಕ್ರೋಶ
ಕಲಬುರಗಿ , ಭಾನುವಾರ, 24 ಮಾರ್ಚ್ 2019 (19:30 IST)
ಉಮೇಶ್ ಜಾಧವ ಕಾಂಗ್ರೆಸ್ ರಾಜೀನಾಮೆ ನೀಡಿದ ಖರ್ಗೆ ವಿರುದ್ಧ ಕೈ ಮುಖಂಡರೇ ತಿರುಗಿ ಬೀಳುತ್ತಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371 ಜೆ ತಂದಿದ್ದು ನಾನೇ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮಾಜಿ ಸಚಿವ ವೈಜನಾಥ್ ಪಾಟೀಲ್ ತಿರುಗೇಟು ನೀಡಿದ್ದಾರೆ.

ಸಾರ್ವಜನಿಕರು, ಹೋರಾಟಗಾರು, ಜನಪ್ರತಿನಿಧಿಗಳ ಪ್ರಯತ್ನದಿಂದ 371(ಜೆ) ಮಂಜೂರಾಗಿದೆ. ಆದರೆ ನಾನೇ ಮಾಡಿದ್ದು ಎಂಬ ಖರ್ಗೆ ಹೇಳಿಕೆಗೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ತೊಡೆತಟ್ಟಿದ ವೈಜಿನಾಥ್ ಪಾಟೀಲ್, ನೀವು ಜನಪ್ರತಿನಿಧಿ ಅದು ನಿಮ್ಮ ಕರ್ತವ್ಯ, ಆದಾಗ್ಯೂ  ನಾನೇ ಮಾಡಿದ್ದು ಅಂತಾ ಇನ್ನೊಮ್ಮೆ ಹೇಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ದೇವರಾಜು ಅರಸು ಬಗ್ಗೆ ಮಾತನಾಡುವ ನೈತಿಕತೆ ಮಲ್ಲಿಕಾರ್ಜುನ ಖರ್ಗೆಗಿಲ್ಲ ಎಂದು ಕಲಬುರಗಿಯಲ್ಲಿ ಖರ್ಗೆ ವಿರುದ್ಧ ಮಾಜಿ ಸಚಿವ ವೈಜನಾಥ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಸು ಬೆನ್ನಿಗೆ ಚೂರಿ ಹಾಕಿದ್ದೆ ಮಲ್ಲಿಕಾರ್ಜುನ ಖರ್ಗೆ ಎಂದು ದೂರಿದ ಅವರು, ಈ ಮೂಲಕ ಅರಸು ಬಿಟ್ಟು ಆರ್. ಗುಂಡೂರಾವ್ ಬಳಿ ಖರ್ಗೆ ಹೋಗಿದ್ದರು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಪಕ್ಷಕ್ಕೆ ಶಾಕ್ ನೀಡಿದ ಸಂಸದ