Webdunia - Bharat's app for daily news and videos

Install App

ಉಳುವಿ ಚನ್ನಬಸವೇಶ್ವರ ಜಾತ್ರೆಗೆ ದೇಗುಲದ ಟ್ರಸ್ಟಿಗಳ ವಿರೋಧ!

Webdunia
ಮಂಗಳವಾರ, 12 ಫೆಬ್ರವರಿ 2019 (18:40 IST)
ಉಳುವಿ ಚನ್ನಬಸವೇಶ್ವರ ಜಾತ್ರೆ ಚಾಲನೆಗೆ ದೇಗುಲದ ಟ್ರಸ್ಟಿಗಳಿಂದ ವಿರೋಧ ವ್ಯಕ್ತವಾಗಿದೆ.

ಕಾರವಾರ ಜಿಲ್ಲೆ ಉಳುವಿ ಚನ್ನಬಸವೇಶ್ವರ ಜಾತ್ರೆ ಚಾಲನೆಗೆ ದೇಗುಲದ ಟ್ರಸ್ಟಿಗಳ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮುರುಘಾ ಶರಣರಿಂದ ಸುದ್ದಿಗೋಷ್ಠಿ ನಡೆಯಿತು. ಮುರುಘಾಮಠದ ಪರಂಪರೆ ಉಳಿಸುವಂತೆ ಮನವಿ ಮಾಡಿದ ಶ್ರೀಗಳು, ಜಯದೇವ, ಮಲ್ಲಿಕಾರ್ಜುನ ಶ್ರೀಗಳ ಕಾಲದಿಂದಲೂ ಉಳುವಿಯಲ್ಲಿ ಶಿವಾನುಭವ, ಪರಂಪರೆ ಉಳಿಸಿಕೊಂಡು ಬರಲಾಗಿದೆ.

ಉಳುವಿಯ ಚನ್ನಬಸವಣ್ಣನವರ ಜಾತ್ರೆಯಲ್ಲಿ ಲಕ್ಷಂತರ ಜನ ಭಾಗವಹಿಸುತ್ತಾರೆ.
ಈ ಜಾತ್ರೆಯಲ್ಲಿ ಜಂಗಮ ದಾಸೋಹ ಮುರುಘಾಮಠದ ಪ್ರಮುಖ ವೈಶಿಷ್ಟ್ಯವಾಗಿದೆ. ಕೆಲವು ಪಟ್ಟಬದ್ರ ಹಿತಾಸಕ್ತಿಗಳು ಮುರುಘಾ ಶರಣರ ಪರಂಪರೆಗೆ ವಿರೋಧಿಸಿದ್ದಾರೆ ಎಂದರು.

ದೇವಸ್ಥಾನದ ಕೆಲ ಟ್ರಸ್ಟಿಗಳು ಮಾಡಿಕೊಂಡಿರುವ ಕೌಟಂಬಿಕ ಸಮಿತಿಯನ್ನು ಶ್ರೀಗಳು ಪ್ರಶ್ನಿಸಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಅದೇ ಕಾರಣಕ್ಕೆ ಚನ್ನಬಸವೇಶ್ವರ ಜಾತ್ರೆಯ ಚಾಲನೆಗೆ ವಿರೋಧ ಮಾಡುತ್ತಿದ್ದಾರೆ ಎಂದರು.

ಈ ವಿಚಾರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ನ್ಯಾಯಾಲಯದ ಆದೇಶದಂತೆ ಮುಂದುವರೆಯುವುದಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿಕೆ ನೀಡಿದರು.  



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments