Select Your Language

Notifications

webdunia
webdunia
webdunia
webdunia

ಕೆಲಸದಾಳಿನಿಂದ ಶೂಲೇಸ್ ಕಟ್ಟಿಕೊಂಡ ಸಿಎಂ ಸಿದ್ದರಾಮಯ್ಯ

ಸಿಎಂ
ಮೈಸೂರು , ಭಾನುವಾರ, 25 ಡಿಸೆಂಬರ್ 2016 (16:25 IST)
ಸ್ವಂಘೋಷಿತ ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದಂತಾಗಿದ್ದು, ತಮ್ಮ ಶೂ ಲೇಸ್‌ನ್ನು ಮನೆ ಕೆಲಸದಾತನ ಬಳಿ ಕಟ್ಟಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.  
 
ಮೈಸೂರಿನಲ್ಲಿ ಹಿರಿಯ ನಟ ಚೇತನ್ ರಾಮ್ ರಾವ್ ನಿಧನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲು ತೆರಳಿದ್ದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಹೊರಗೆ ಬಂದ ಸಿಎಂ ಶೂ ಲೇಸ್‌ನ್ನು ತಮ್ಮ ಮನೆ ಕೆಲಸದಾತನ ಕೈಯಿಂದ ಕಟ್ಟಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. 
 
ಸಾರ್ವಜನಿಕವಾಗಿಯೇ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿರುವ ಸಿಎಂ ಮಾತ್ರ ಯಾವುದೇ ಪ್ರತಿಕ್ರಿಯಿ ನೀಡದೆ ಅಧಿಕಾರದ ದರ್ಪದಲ್ಲಿಯೇ ನಿಂತಿದ್ದರು. 
 
ಸಾರ್ವಜನಿಕವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸದಾತನ ಬಳಿ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿದದ್ದು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಮುಖ ಅನಾವರಣಗೊಂಡಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. 
 
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು, ಸಿದ್ದರಾಮಯ್ಯ ಅವರಿಗೆ ಶೂ ಹಾಕಿದ್ದು ಸರಕಾರಿ ಅಧಿಕಾರಿಯಲ್ಲ. ಅವರು ಸಿಎಂ ಸಂಬಂಧಿ ಎಂದು ಸ್ಪಷ್ಟನೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ವರ್ತನೆಯೇ ಚುನಾವಣೆ ಕಣಕ್ಕಿಳಿಯಲು ಪ್ರೇರಣೆ: ಶ್ರೀನಿವಾಸ್ ಪ್ರಸಾದ್