ಆಪರೇಷನ್ ಕಮಲ ಭೀತಿ ಹಿನ್ನಲೆ, ಇನ್ನೆರಡು ದಿನ ಜೆಡಿಎಸ್ ಶಾಸಕರಿಗೆ ಭಾರಿ ಭದ್ರತೆ

Webdunia
ಸೋಮವಾರ, 21 ಮೇ 2018 (15:57 IST)
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಹಿನ್ನಲೆ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್‌ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ರೆಸಾರ್ಟ್‌ಗೆ ಶೀಪ್ಟ್ ಹಾಗಿದ್ದಾರೆ. 
ಅಂದ ಹಾಗೆ ಪ್ರಮಾಣ ವಚನದವರೆಗೂ ಜೆಡಿಎಸ್ ಶಾಸಕರನ್ನ ಕ್ಷೇತ್ರಗಳಿಗೆ ಕಳಿಸದೇ ಒಟ್ಟಾಗಿ ಶಾಸಕರು ಇರಲು ಚಿಂತಿಸಿದ್ದು ದೇವನಹಳ್ಳಿ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟಿಜ್ ಗಾಲ್ಪ್ ರೆಸಾರ್ಟ್‌ನಲ್ಲಿ 3೦ ರೂಮ್‌ಗಳನ್ನ ಬುಕ್ ಮಾಡಲಾಗಿದೆ. 
 
ಈ ಹಿನ್ನಲೆಯಲ್ಲಿ ಕಳೆದ ರಾತ್ರಿ 32 ಜೆಡಿಎಸ್ ಶಾಸಕರು ರೆಸಾರ್ಟ್‌ಗೆ ಆಗಮಿಸಿದ್ದು ತಮ್ಮ ಕುಟುಂಬದ ಜೊತೆ ವಿಲ್ಲಾಗಳಲ್ಲಿ ತಂಗಿದ್ದಾರೆ. ಇನ್ನೂ ಎರಡು ಮೂರು ದಿನಗಳ ಕಾಲ ಇಲ್ಲೇ ಉಳಿಯಲಿದ್ದು ಜೆಡಿಎಸ್ ಶಾಸಕರು ತಮ್ಮ ಕುಟುಂಬದ ಜತೆ ಕಾಲ ಕಳೆಯಲಿದ್ದಾರೆ. 
 
ಇನ್ನೂ ವಿಶ್ವಾಸಮತದವರೆಗೂ ಆಪರೇಷನ್ ಕಮಲದ ಭೀತಿಯಿಂದ ಪಾರಾಗಲು ಈ ರೀತಿಯ ಪ್ಲಾನ್ ಕುಮಾರಸ್ವಾಮಿಯವರು ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಇಂದು ಬೆಳಗ್ಗೆಯಿಂದಲೂ ರೆಸಾರ್ಟ್‌ಗೆ ತೆರಳುವ ಸಿಬ್ಬಂದಿಯನ್ನ ತಪಾಸಣೆ ಮಾಡುತ್ತಿರುವ ಪೊಲೀಸರು ಯಾರಿಗೂ ಒಳಗೆ ಪ್ರವೇಶವನ್ನ ಕಲ್ಪಿಸಿಕೊಟ್ಟಿಲ್ಲ. 
 
ಜತೆಗೆ ಇಂದು ಬೆಳಗ್ಗೆ ೧೧ ಗಂಟೆ ನಂತರ ಹಾಸನದಿಂದ ಕುಮಾರಸ್ವಾಮಿಯವರು ರೆಸಾರ್ಟ್‌ಗೆ ಆಗಮಿಸುವ ನೀರಿಕ್ಷೆಯಿದ್ದು ಶಾಸಕರ ಜತೆ ಉಭಯ ಕುಶಲೋಪರಿ ನಡೆಸಿ ನಂತರ ಕೆಂಪೇಗೌಡ ವಿಮಾನ ನಿಲ್ದಾಣದ ಮೂಖಾಂತರ ದೆಹಲಿಗೆ ನಿಯೋಜಿತ ಸಿಎಂ ಹೆಚ್‌ಡಿಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ಯಾಗ್ ಎಗರಿಸಲು ಬಂದ ಖದೀಮರು.. ಯಾಕಾದ್ರೂ ಹೋದೆವೋ ಎನ್ನುವಂತೆ ಗುನ್ನಾ ಕೊಟ್ಟ ಯುವತಿ Video

Video: ಜೋಡೆತ್ತು ಎಂದರೆ ಹೀಗಿರಬೇಕು.. ಜೊತೆಗಾರ ಎತ್ತು ಸತ್ತಿದ್ದಕ್ಕೆ ಜೋಡಿ ಎತ್ತು ಮಾಡಿದ್ದು ನೋಡಿದ್ರೆ ಕಣ್ಣೀರು ಬರುತ್ತೆ

ಡಿಕೆ ಶಿವಕುಮಾರ್ ಪಾಲಿಗೆ ಇಂದು ಮಹತ್ವದ ದಿನ

Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ವಾರಂತ್ಯಕ್ಕೆ ಭಾರೀ ಮಳೆ

ಮೂರು ವರ್ಷಗಳಿಂದ ನಾನು ಟೀಕೆ ಮಾಡಿದ್ದೇನೆ. ಈಗ ಅದಕ್ಕೆ ಸಮಯವಲ್ಲ

ಮುಂದಿನ ಸುದ್ದಿ
Show comments