Select Your Language

Notifications

webdunia
webdunia
webdunia
webdunia

ನಮ್ಮ ಪರಿವಾರದಿಂದ ಇಬ್ಬರು ಮಾತ್ರ ಕಣಕ್ಕೆ: ಎಚ್ಡಿಕೆ

ನಮ್ಮ ಪರಿವಾರದಿಂದ ಇಬ್ಬರು ಮಾತ್ರ ಕಣಕ್ಕೆ: ಎಚ್ಡಿಕೆ
ಬೆಂಗಳೂರು , ಶುಕ್ರವಾರ, 20 ಜನವರಿ 2017 (07:59 IST)
ಮುಂಬರುವ ವಿಧಾನಸಭಾ ಚುನಾವಣೆಗೆ ನಮ್ಮ ಪರಿವಾರದಿಂದ ಇಬ್ಬರು ಮಾತ್ರ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ  ಮತ್ತೊಮ್ಮೆ  ಸ್ಪಷ್ಟಪಡಿಸಿದ್ದಾರೆ. 
 
ನಗರದ ಯುಬಿ ಸಿಟಿ  ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧ ಮಾಡಿಲ್ಲ. ಈ ಕುರಿತು ಇನ್ನು ಮೇಲಷ್ಟೇ ಮಾತುಕತೆ ನಡೆಸಬೇಕಿದೆ. ನಮ್ಮ ಪರಿವಾರದಿಂದ ಇಬ್ಬರಷ್ಟೇ ಸ್ಪರ್ಧಿಸುವುದು. ಮಾಜಿ ಪ್ರಧಾನಿ ಸೊಸೆಯಂದಿರು, ಮೊಮ್ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
 
ಫೆಬ್ರವರಿ ಕೊನೆ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ ಎಂದು ಅವರು ಹೇಳಿದ್ದು, ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಶಾಸಕರಿಗೆ ಮುಚ್ಚಿರುವ ಬಾಗಿಲನ್ನು ತೆರೆಯಲಾಗುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯರ ಮೇಲೆ ಹಲ್ಲೆ: ಸಂಸದ ಅನಂತ್‌ ಕುಮಾರ್ ಹೆಗಡೆಗೆ ನಿರೀಕ್ಷಣಾ ಜಾಮೀನು